ಕೇರಳಕ್ಕೆ 20 ಕೋಟಿ ರೂ. ಘೋಷಿಸಿದ ಮಹಾರಾಷ್ಟ್ರ ಸರಕಾರ

Update: 2018-08-19 10:15 GMT

ಹೊಸದಿಲ್ಲಿ, ಆ.19: ಪ್ರವಾಹಪೀಡಿತ ಕೇರಳಕ್ಕೆ ಮಹಾರಾಷ್ಟ್ರ ಸರಕಾರವು 20 ಕೋಟಿ ರೂ.ಗಳನ್ನು ಘೋಷಿಸಿದೆ. ಒಣ ಆಹಾರಗಳ 25 ಸಾವಿರ ಪ್ಯಾಕೆಟ್ ಗಳನ್ನು , 10 ಟನ್ ರಸ್ಕ್ ಮತ್ತು ಇತರ ಅವಶ್ಯಕ ಸಾಮಗ್ರಿಗಳನ್ನೂ ಸರಕಾರವು ಕೇರಳಕ್ಕೆ ಕಳುಹಿಸಲಿದೆ.

ಬಿಸ್ಕಟ್ ಗಳು ಮತ್ತು ಇತರ ಆಹಾರ ಪದಾರ್ಥಗಳನ್ನೊಳಗೊಂಡ 15 ಟನ್ ತೂಕದ ಸಾಮಗ್ರಿಗಳನ್ನು ಮತ್ತೊಮ್ಮೆ ರಾಜ್ಯಕ್ಕೆ ಕಳುಹಿಸುವಂತೆಯೂ ಮಹಾರಾಷ್ಟ್ರ ಸರಕಾರ ಭಾರತೀಯ ವಾಯುಪಡೆಗೆ ಮನವಿ ಮಾಡಿದೆ.

“ಕೇರಳ ಕೇಳಿದ್ದ ಪರಿಹಾರ ಸಾಮಗ್ರಿಗಳನ್ನು ನಾವು ಕಳುಹಿಸುತ್ತಿದ್ದೇವೆ. ಕೇರಳ ರಾಜ್ಯ ಸರಕಾರದೊಂದಿಗೆ ನಾನು ಸಂಪರ್ಕದಲ್ಲಿದ್ದೇನೆ” ಎಂದು ಮಹಾರಾಷ್ಟ್ರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮೇಧಾ ಗಾಡ್ಗಿಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News