ಪರಿಹಾರ ಶಿಬಿರದ ಯುವ ಜೋಡಿ ವಿವಾಹ

Update: 2018-08-19 18:12 GMT

ಮಲಪ್ಪುರಂ, ಆ. 19: ನೆರೆಯಿಂದ ಸಂತ್ರಸ್ತವಾಗಿರುವ ಕೇರಳದ ಮಲಪ್ಪುರಂ ಜಿಲ್ಲೆಯ ಪರಿಹಾರ ಶಿಬಿರದಲ್ಲಿದ್ದ ಯುವಜೋಡಿ ರವಿವಾರ ಸಪ್ತಪದಿ ತುಳಿದಿದ್ದಾರೆ.

ಮೂರು ದಿನಗಳ ಹಿಂದೆ ಮಲಪ್ಪುರಂ ಸಮೀಪದ ಎಂಎಸ್‌ಪಿ ಶಾಲೆಯಲ್ಲಿ ನೆಲೆಸಿದ್ದ ಅಂಜು ಅವರು ಶೈಜು ಅವರನ್ನು ತಿರಿಪುಂಥ್ರ ದೇವಾಲಯದಲ್ಲಿ ವಿವಾಹವಾಗಿದ್ದಾರೆ. ಈ ಸಂದರ್ಭ ಸಂಬಂಧಿಕರು ಹಾಗೂ ಪರಿಹಾರ ಶಿಬಿರದ ಸಂತ್ರಸ್ತರು ಇದ್ದರು. ನಮ್ಮ ಮನೆಯ ನಾಲ್ಕರಲ್ಲಿ ಮೂರು ಭಾಗ ನೆರೆ ನೀರಿಲ್ಲಿ ಮುಳುಗಿದೆ. ಆರಂಭದಲ್ಲಿ ವಿವಾಹವನ್ನು ಮುಂದೂಡಲು ನಿರ್ಧರಿಸಿದ್ದೆವು. ಆದರೆ, ಇಲ್ಲಿನ ಜನರಿಂದ ನಮಗೆ ಬೆಂಬಲ ದೊರೆಯಿತು. ಆದರಿಂದ ನಿಗದಿತ ದಿನಾಂಕದಂದೇ ವಿವಾಹ ನೆರವೇರಿಸಲಾಯಿತು ಎಂದು ವಧುವಿನ ಸಮಂಧಿಕರೊಬ್ಬರು ತಿಳಿಸಿದ್ದಾರೆ. ದೇವಾಲಯ ಟ್ರಸ್ಟಿ ರುಚಿಯಾದ ಆಹಾರ ಪೂರೈಸಿದರು. ಇದೇ ರೀತಿ ಮಲಪ್ಪುರಂ ಜಿಲ್ಲೆಯ ತಿರುನಾವಾಯ ಹಾಗೂ ನೀಲಂಬೂರು ಪರಿಹಾರ ಶಿಬಿರಗಳಲ್ಲಿ ವಿವಾಹ ನಡೆದಿದೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News