113 ಪ್ರಕರಣದಲ್ಲಿ ಬೇಕಾಗಿದ್ದ 65 ವರ್ಷದ ಮಹಿಳೆ ಬಂಧನ !

Update: 2018-08-19 18:14 GMT

ಹೊಸದಿಲ್ಲಿ, ಆ. 19: ವ್ಯಕ್ತಿಯೋರ್ವನನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಬೇಕಾಗಿದ್ದ ದಕ್ಷಿಣ ದಿಲ್ಲಿಯ ಸಂಗಮ್ ವಿಹಾರದಲ್ಲಿ ‘ಅಪರಾಧದ ದೇವತೆ’ ಎಂದು ಕರೆಯಲಾಗುವ 62ರ ಹರೆಯದ ಮಹಿಳೆಯೋರ್ವರನ್ನು ಬಂಧಿಸಲಾಗಿದೆ.

 ಬಸಿರನ್ ಎಂದು ಗುರುತಿಸಲಾಗುವ ಆರೋಪಿಯನ್ನು ಘೋಷಿತ ಅಪರಾಧಿ ಎಂದು ಪ್ರಕಟಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳ್ಳಭಟ್ಟಿ, ಕೊಲೆ, ದರೋಡೆ, ಗುತ್ತಿಗೆ ಕೊಲೆ ಹಾಗೂ ಚಿನ್ನಾಭರಣ ಅಪಹರಣ ಸೇರಿದಂತೆ 113 ಪ್ರಕರಣಗಳನ್ನು ಬಸಿರನ್ ಹಾಗೂ ಅವರು ಕುಟುಂಬದ ವಿರುದ್ಧ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

 ಆಸ್ತಿ ವಶಪಡಿಸಿಕೊಳ್ಳುವುದಕ್ಕೆ ಸಂಬಂಧಿಸಿ ಮುಂದಿನ ಕಾರ್ಯತಂತ್ರ ನಿರ್ಧರಿಸುವ ಸಲುವಾಗಿ ತನ್ನ ಕುಟುಂಬದ ಸದಸ್ಯರನ್ನು ಭೇಟಿಯಾಗಲು ಆಗಮಿಸಿದ ಸಂದರ್ಭ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಸಂಗಮ್ ವಿಹಾರ್‌ನಿಂದ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಉಪ ಆಯುಕ್ತ (ದಕ್ಷಿಣ) ರೋಮಿಲ್ ಬಾನಿಯಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News