ಕೊಡಗು ವಿಕೋಪ: ನಶಾತುದ್ದೀನ್ ಯಂಗ್ ಫೆಡರೇಶನ್ ಪುದು ವತಿಯಿಂದ ದೇಣಿಗೆ

Update: 2018-08-24 06:26 GMT

ಫರಂಗಿಪೇಟೆ, ಆ. 24: ಪುದು ಗ್ರಾಮದ ನಶಾತುದ್ದೀನ್ ಯಂಗ್ ಫೆಡರೇಶನ್ ಕುಂಜತ್ಕಳ ಇದರ ವತಿಯಿಂದ ಮನೆ ಮನೆಗೆ ಭೇಟಿ ನೀಡಿ ದೇಣಿಗೆ ಸಂಗ್ರಹಿಸಿ ಸುಮಾರು ಮೂರು ಲಕ್ಷ ರೂ. ವೆಚ್ಚದ ಅಗತ್ಯ ಸಾಮಗ್ರಿಗಳನ್ನು ಕೊಡಗಿನ ಪ್ರಾಕೃತಿಕ ವಿಕೋಪದ ಸಂತ್ರಸ್ಥರಿಗೆ ಗುರುವಾರ ರವಾನೆ ಮಾಡಲಾಯಿತು.

ರೇಶನ್, ಬಟ್ಟೆ ಮತ್ತು ಅಗತ್ಯ ಮೂಲ ವಸ್ತುಗಳನ್ನೊಳಗೊಂಡು ಸುಮಾರು 110 ಮಂದಿಗೆ ಮೂರು ಲಕ್ಷ ರೂ. ವೆಚ್ಚದಲ್ಲಿ ಕಿಟ್ ರವಾನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮೊಹಿದ್ದೀನ್ ಜುಮಾ ಮಸೀದಿ ಫರಂಗಿಪೇಟೆ ಖತೀಬ್ ಅಬ್ಬಾಸ್ ದಾರಿಮಿ, ಮಸೀದಿಯ ಅಧ್ಯಕ್ಷ ಮುಹಮ್ಮದ್ ಬಾವ, ನಶಾತುದ್ದೀನ್ ಯಂಗ್ ಪೆಡರೇಶನ್ ಅಧ್ಯಕ್ಷ ಅಬೂಬಕರ್ ಸಿದ್ದೀಕ್, ಪ್ರಧಾನ ಕಾರ್ಯದರ್ಶಿ ಹನೀಫ್ ಅಲಂಕಾರ್, ಉಪಾಧ್ಯಕ್ಷ ಅನ್ವರ್ ಬಿ ಹತ್ತನೇಮೈಲ್ ಕಲ್ಲು,   ಪುದು ಗ್ರಾಮ ಪಂಚಾಯತ್ ಸದಸ್ಯ ನಝೀರ್ ಹತ್ತನೇಮೈಲ್ ಕಲ್ಲು, ತರ್ಬಿಯತುಲ್ ಅತ್ಪಾಲ್ ಮದರಸ ಸಮಿತಿ ಸದಸ್ಯ ಹನೀಫ್ ಬಿ, ಮಾಜಿ ಗ್ರಾಪಂ ಸದಸ್ಯ ಲತೀಫ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News