ದೇವಾನಂದ್‌ರ ಡ್ಯೂಪ್ ಕಲಾವಿದ ವಸಂತ್ ಶೆಣೈ ನಿಧನ

Update: 2018-08-24 16:16 GMT

ಉಡುಪಿ, ಆ.24: ಹಿಂದಿ ಚಿತ್ರರಂಗದ ಎವರ್‌ಗ್ರೀನ್ ಹೀರೊ ಎನಿಸಿದ್ದ ದೇವಾನಂದ್ ಅವರ ಡ್ಯೂಪ್ ಕಲಾವಿದ, ಹಿಂದಿ ಚಿತ್ರರಂಗದ ಸಹ ನಿರ್ದೇಶಕ ಮಣಿಪಾಲ ಸರಳಬೆಟ್ಟುವಿನ ನಿವಾಸಿ ವಸಂತ್ ವಿ.ಶೆಣೈ(74) ಅಲ್ಪಕಾಲದ ಅಸೌಖ್ಯದಿಂದ ಮಣಿಪಾಲ ಆಸ್ಪತ್ರೆಯಲ್ಲಿ ಇಂದು ನಿಧನರಾದರು.

ಹಿಂದಿ ಚಿತ್ರರಂಗದಲ್ಲಿ ಕಪ್ಪು ಬಿಳುಪು ಕಾಲದಿಂದ ಕಲರ್‌ಫುಲ್ ಸಿನಿಮಾ ಸ್ಕೋಪ್ 80ರ ದಶಕ ತನಕ ದೇವಾನಂದ್ ಅವರ ಏಳು ಚಿತ್ರಗಳಲ್ಲಿ ಡ್ಯೂಪ್ ಕಲಾವಿದರಾಗಿ ನಟಿಸಿದ್ದ ಇವರು, ಹಲವು ಯಶಸ್ವಿ ಹಿಂದಿ ಚಿತ್ರಗಳಿಗೆ ಹ ನಿರ್ದೇಶನ ಮಾಡಿದ್ದರು.

ದೇವಾನಂದ್‌ರ ಸೂಪರ್ ಹಿಟ್ ಚಿತ್ರಗಳಾದ ಗೈಡ್, ಬನರಾಸಿ ಬಾಬು, ಚಂದನ್ ಕಾ ಪನ್ನ, ತೀನ್ ದೇವಿಯಾ, ಜ್ಯುವೆಲ್ ಥೀಪ್, ಪ್ರೇಮ್‌ಪೂಜಾರಿ, ಹರೇ ರಾಮ ಹರೇ ಕೃಷ್ಣ, ಜಾನಿ ಮೇರಾ ನಾಮ್, ಅಮೀರ್ ಗರೀಬ್, ಶರೀಫ್ ಬದ್ಮಾಶ್, ತೇರೆ ಮೇರೆ ಸಪ್ನೆ, ಹೀರಾಪನ್ನಾ ಸಿನೆಮಾಗಳಲ್ಲಿ ದೇವಾನಂದರಿಗೆ ಡ್ಯೂಪ್ ಕಲಾವಿದರಾಗಿ ನಟಿಸಿದ್ದಲ್ಲದೇ, ಸಹ ನಿರ್ದೇಶಕರಾಗಿ ದುಡಿದಿದ್ದರು.

ಅಮಿತಾಬ್‌ಬಚ್ಚನ್‌ರ ಶೋಲೆ, ದೀವಾರ್, ಧರ್ಮಾತ್ಮ, ಅಮರ್ ಅಕ್ಬರ್ ಆಂಥೋನಿ ಹಾಗೂ ಇತರ ನಟರ ಶಂಕರ್‌ದಾದಾ, ನೌಕರ್, ಮರ್ಯಾದ, ದೋ ಬಧನ್ ಮೊದಲಾದ ಹಿಟ್ ಚಿತ್ರಗಳಿಗೆ ಸಹನಿರ್ದೇಶಕರಾಗಿ ಕೆಲಸ ಮಾಡಿದ್ದರು. ಕಳೆದ ವರ್ಷ ಇವರಿಗೆ ಉಡುಪಿ ಜಿಲ್ಲಾಡಳಿತವು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಹಿಂದಿ ಚಿತ್ರರಂಗದ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News