ಪ್ರತ್ಯೇಕ ಪ್ರಕರಣ: ಇಬ್ಬರ ನಾಪತ್ತೆ

Update: 2018-08-24 16:19 GMT

ಕುಂದಾಪುರ, ಆ.24: ಕುಂದಾಪುರ ಖಾರ್ವಿ ಕೆಳಕೇರಿಯ ವಾಸುದೇವ ನಾಯ್ಕ ಎಂಬವರ ಮಗಳು ಗೀತಾ (21) ಎಂಬವರು ಆ. 20ರಂದು ಬೆಳಗ್ಗೆ ಮನೆಯಿಂದ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಈವರೆಗೆ ವಾಪಾಸಾಗದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಕೋಟ: ಹಾವೇರಿ ಮೂಲದ ಕೋಟ ತಸ್ಮಯಿ ರೆಸಿಡೆನ್ಸಿಯ ನಿವಾಸಿ ಸದಾನಂದ ಗೌಡ(35) ಎಂಬವರು ಆ.22ರಂದು ಮಧ್ಯಾಹ್ನ ಕೆಲಸಕ್ಕೆ ಹೋಗದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News