ಪತ್ರಿಕಾ ಜಾಹಿರಾತಿನ ಮೂಲಕ ವಂಚನೆ: ದೂರು

Update: 2018-08-24 16:21 GMT

ಹೆಬ್ರಿ, ಆ.24: ಸಾಲ ನೀಡುವುದಾಗಿ ಪತ್ರಿಕಾ ಜಾಹೀರಾತಿನ ಮೂಲಕ ವಂಚನೆ ಎಸಗಿರುವ ಬಗ್ಗೆ ಹೆಬ್ರಿ ಪೊಲಿೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 2016ರ ಆಗಸ್ಟ್ ತಿಂಗಳ ದಿನಪತ್ರಿಕೆಯೊಂದರಲ್ಲಿ ಆದರ್ಶ ಫೈನಾನ್ಸ್ ಪ್ರೈ ಲಿ ಹೆಸರಿನಲ್ಲಿ ಪೇಪರ್ ಡಾಕ್ಯುಮೆಂಟ್ ಆಧಾರದ ಮೇಲೆ ಸಾಲ ನೀಡುವುದಾಗಿ ಜಾಹಿರಾತು ನೀಡಿದ್ದು, ಅದರಂತೆ ಅಲ್ಬಾಡಿ ಗ್ರಾಮದ ಆರ್ಡಿಯ ಮಂಜು ನಾಥ್ ರಾವ್ ಎಂಬವರು ಸಂಸ್ಥೆಯ ಮಿಥುನ್ ಗೌಡ ಎಂಬಾತನನ್ನು ಸಂಪರ್ಕಿಸಿ ವಿವಿಧ ಖಾತೆಗಳಿಗೆ 29,100ರೂ. ಜಮಾ ಮಾಡಿದ್ದರು. ಆದರೆ ಮಿಥುನ್ ಗೌಡ ಸಾಲವನ್ನು ನೀಡದೆ ೋಸ ಮಾಡಿರುವುದಾಗಿ ದೂರಲಾಗಿದೆ.

ಇದೀಗ ಮಿಥುನ್ ಗೌಡ 2018ರ ಆ.8ರ ಬೇರೆ ದಿನಪತ್ರಿಕೆಯೊಂದರಲ್ಲಿ ಅದೇ ಜಾಹೀರಾತು ನೀಡಿದ್ದು, ಈ ರೀತಿಯ ಸುಳ್ಳು ಜಾಹಿರಾತುಗಳಿಂದ ಇತರರಿಗೆ ಮೋಸವಾಗುವ ಸಾಧ್ಯತೆಯಿರುವುದರಿಂದ ಮಿಥುನ್ ಗೌಡ ವಿರುದ್ದ ಕ್ರಮ ಜರಗಿಸುವಂತೆ ಮಂಜುನಾಥ್ ಗೌಡ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News