ಮಾನನಷ್ಟ ಪ್ರಕರಣ:ಅಮಿತ್ ಶಾಗೆ ನ್ಯಾಯಾಲಯದ ಸಮನ್ಸ್

Update: 2018-08-29 17:23 GMT

ಕೋಲ್ಕತಾ, ಆ.29: ತೃಣಮೂಲ ಯುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರು ದಾಖಲಿಸಿರುವ ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆ.28ರಂದು ತನ್ನೆದುರು ಹಾಜರಾಗುವಂತೆ ಆದೇಶಿಸಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಸ್ಥಳೀಯ ನ್ಯಾಯಾಲಯವು ಬುಧವಾರ ಸಮನ್ಸ್ ಹೊರಡಿಸಿದೆ.

ಆ.11ರಂದು ಕೋಲ್ಕತಾದಲ್ಲಿ ಬಹಿರಂಗ ಸಭೆಯಲ್ಲಿ ಶಾ ಅವರು ತನ್ನ ವಿರುದ್ಧ ಅವಮಾನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ತೃಣಮೂಲ ಸಂಸದರೂ ಆಗಿರುವ ಬ್ಯಾನರ್ಜಿ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News