ಹೊಲದಲ್ಲಿ ದನ ಮೇಯಲು ಬಿಟ್ಟ ವೃದ್ಧನಿಗೆ ಥಳಿಸಿ, ಮೆರವಣಿಗೆ ನಡೆಸಿದರು !

Update: 2018-09-03 18:07 GMT

ಹೊಸದಿಲ್ಲಿ, ಸೆ. 3: ತಮ್ಮ ಹೊಲದಲ್ಲಿ ಗರ್ಭಿಣಿ ಹಸುವನ್ನು ಮೇಯಲು ಬಿಟ್ಟು ಬೆಳೆ ಹಾನಿಗೆ ಪ್ರಯತ್ನಿಸುತ್ತಿದ್ದಾರೆ ಎಂದು ಶಂಕಿಸಿ ಉತ್ತರಪ್ರದೇಶದ ಬಲರಾಮಪುರ ಜಿಲ್ಲೆಯಲ್ಲಿ ನಾಲ್ವರು ವ್ಯಕ್ತಿಗಳು 70 ವರ್ಷದ ವೃದ್ಧರೋರ್ವರಿಗೆ ಥಳಿಸಿದ ಘಟನೆ ಕಳೆದ ವಾರ ಸಂಭವಿಸಿದೆ.

‘‘ಅವರು ನನ್ನ ಕೈಗಳನ್ನು ಹಿಡಿದು, ಮುಖಕ್ಕೆ ಕೆಸರು ಹಾಗೂ ಇದ್ದಲು ಎರಚಿದರು. ಒಡೆದ ಕನ್ನಡಕವನ್ನು ಧರಿಸುವಂತೆ ಬಲವಂತಪಡಿಸಿ ಸುಣ್ಣದ ಪುಡಿಯಿಂದ ಹಣೆಯ ಮೇಲೆ ಗೆರೆ ಎಳೆದರು ಹಾಗೂ ಗ್ರಾಮದಲ್ಲಿ ಮೆರವಣಿಗೆ ನಡೆಸಿ ಅವಮಾನ ಮಾಡಿದರು’’ ಎಂದು ವೃದ್ಧ ಕೈಲಾಸ್ ನಾಥ್ ಶುಕ್ಲಾ ಆರೋಪಿಸಿದ್ದಾರೆ.

‘‘ನಾನು ವಿರೋಧಿಸಿದಾಗ ಅವರು ನನ್ನ ತೋಳನ್ನು ಮುರಿದರು.’’ ಎಂದು ಅವರು ಹೇಳಿದ್ದಾರೆ. ಆದರೆ, ನಕಲಿ ಗೋರಕ್ಷಕರ ದಾಳಿಗೆ ಒಳಗಾಗಿರುವ ಮಾಧ್ಯಮದ ವರದಿಯನ್ನು ಅವರು ನಿರಾಕರಿಸಿದ್ದಾರೆ.

ತಪ್ಪು ತಿಳುವಳಿಕೆ ವಾಗ್ವಾದಕ್ಕೆ ಕಾರಣವಾಯಿತು. ಈ ಹಿನ್ನೆಲೆಯಲ್ಲಿ ನಾಲ್ವರು ವ್ಯಕ್ತಿಗಳು ಶುಕ್ಲಾ ಅವರಿಗೆ ಥಳಿಸಿದರು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಘಟನೆಗೆ ಸಂಬಂಧಿಸಿ ದಿನೇಶ್ ಶುಕ್ಲಾ (25), ಉಮೇಶ್ ತಿವಾರಿ (22), ಜೀವನ್‌ಲಾಲ್ (21), ರಾಮ್ ಬದನ್ (24) ಅವರನ್ನು ಪೊಲೀಸರು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News