ಸೆ.5: ಮುಂಡ್ಕಿನ್ಜಡ್ಡಿನಲ್ಲಿ ಕೃಷಿ ಮಾಹಿತಿ
Update: 2018-09-04 17:21 GMT
ಉಡುಪಿ, ಸೆ.4: ಜಿಲ್ಲಾ ಕೃಷಿಕ ಸಂಘದ ಬ್ರಹ್ಮಾವರ ವಲಯ ಸಮಿತಿ ಆಯೋಜಿಸಿರುವ ಕೃಷಿ ಮಾಹಿತಿ ಸಭೆ ಸೆ.5ರ ಬುಧವಾರ ಸಂಜೆ 4:30ಕ್ಕೆ ಕುಂಜಾಲು ಮುಂಡ್ಕಿನಜಡ್ಡು ಶಾಲಾವಠಾರದಲ್ಲಿ ನಡೆಯಲಿದೆ.
ಸಂಪನ್ಮೂಲ ವ್ಯಕ್ತಿಗಳಾಗಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು, ಕುದಿ ಶ್ರೀನಿವಾಸ ಭಟ್, ದಿನೇಶ್ ಶೆಟ್ಟಿ ಹೆರ್ಗ ಮತ್ತು ಶ್ರೀನಿವಾಸ ಬಲ್ಲಾಳ್ ಮಲ್ಲಂಪಳ್ಳಿ ಭಾಗವಹಿಸಲಿದ್ದಾರೆ. ಕಡಿಮೆ ವೆಚ್ಚದಲ್ಲಿ ವೈಜ್ಞಾನಿಕ ಮತ್ತು ಲಾಭದಾಯಕವಾಗಿ ವಿವಿಧ ಕೃಷಿ ಮಾಡುವುದು, ಕೃಷಿ ಬೆಳೆಗಳ ಕೀಟ- ರೋಗಗಳ ನಿರ್ವಹಣೆ ಕುರಿತ ಸಮಗ್ರ ಮಾಹಿತಿಯನ್ನು ಇಲ್ಲಿ ನೀಡಲಾಗುವುದು ಎಂದು ಸಂಘದ ಪ್ರಕಟಣೆ ತಿಳಿಸಿದೆ.