ಮೀನು ಹಿಡಿಯಲು ಹೋದ ಯುವಕ ನಾಪತ್ತೆ

Update: 2018-09-04 17:32 GMT

ಕೋಟ, ಸೆ.4: ಆವರ್ಸೆ ಗ್ರಾಮದ ಸುಳಿಗುಂಡಿ ಕಿರಾಡಿ ಎಂಬಲ್ಲಿರುವ ಸೀತಾ ನದಿ ಹೊಳೆಯಲ್ಲಿ ಸೆ.2ರಂದು ಬೆಳಗ್ಗೆ 10ಗಂಟೆಗೆ ಮೀನು ಹಿಡಿಯಲು ಹೋದ ಯುವಕನೋರ್ವ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.

ನಾಪತ್ತೆಯಾದವರನ್ನು ಕಿರಾಡಿಯ ರಾಮ ನಾಯ್ಕ ಎಂಬವರ ಮಗ ಸತೀಶ (29) ಎಂದು ಗುರುತಿಸಲಾಗಿದೆ. ಇವರು ಮನೆ ಸಮೀಪದ ಸೀತಾನದಿ ಹೊಳೆ ಯಲ್ಲಿ ಮೀನು ಹಿಡಿಯಲು ಹೋಗಿದ್ದು, ಸಂಜೆವರೆಗೂ ಮನೆಗೆ ಬಾರದ ಸತೀಶ್‌ರನ್ನು ಹುಡುಕಾಡಿದಾಗ ಹೊಳೆಯ ದಡದಲ್ಲಿ ಮೊಬೈಲ್ ಹಾಗೂ ಕೊಡೆ ಪತ್ತೆಯಾಗಿದೆ.

ಸತೀಶ್ ಹೊಳೆಗೆ ಬಿದ್ದು ನಾಪತ್ತೆಯಾಗಿರಬಹುದೆಂಬ ಶಂಕೆಯಲ್ಲಿ ಮುಳುಗು ತಜ್ಞರನ್ನು ಕರೆಸಿ ಹುಡುಕಾಟ ನಡೆಸಲಾಯಿತು. ಆದರೆ ಈವರೆಗೆ ಸತೀಶ್ ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News