ಕಾಂಗ್ರೆಸ್ ರಕ್ತದಲ್ಲಿ ಬ್ರಾಹ್ಮಣ ಸಮಾಜದ ಡಿಎನ್‌ಎ ಇದೆ: ಸುರ್ಜೆವಾಲಾ

Update: 2018-09-05 14:41 GMT

ಕುರುಕ್ಷೇತ್ರ(ಹರ್ಯಾಣ),ಸೆ.5: ಇಲ್ಲಿ ಸೋಮವಾರ ನಡೆದ ‘ಬ್ರಾಹ್ಮಣ ಸಮಾಜ ’ದ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ನ ಮಾಧ್ಯಮ ಘಟಕದ ಮುಖ್ಯಸ್ಥ ರಣದೀಪ ಸುರ್ಜೆವಾಲಾ ಅವರು ಬಹಿರಂಗವಾಗಿಯೇ ಜಾತಿ ಕಾರ್ಡ್‌ನ್ನು ಝಳಪಿಸಿದ್ದಾರೆ.

ಬ್ರಾಹ್ಮಣ ಸಮಾಜದ ಈ ಸಮಾವೇಶದೊಂದಿಗೆ ಹೊಸ ಸಾಮಾಜಿಕ ಕ್ರಾಂತಿಯೊಂದು ನಡೆಯುವ ಅಗತ್ಯವಿದೆ ಎಂದು ಮಾತು ಆರಂಭಿಸಿದ ಅವರು,ಬ್ರಾಹ್ಮಣ ಸಮಾವೇಶವನ್ನು ರಾಹುಲ್ ಗಾಂಧಿಯವರ ಚಿತ್ರ ಮತ್ತು ಕಾಂಗ್ರೆಸ್ ಧ್ವಜ ಹಾಗೂ ತಿರಂಗಾದಡಿ ಏಕೆ ನಡೆಸಲಾಗುತ್ತದೆ ಎಂದು ತನ್ನ ಸಹೋದ್ಯೋಗಿಯೋರ್ವರು ಪ್ರಶ್ನಿಸಿದ್ದು,ವೇದಿಕೆಯಲ್ಲೇ ಉತ್ತರಿಸುವುದಾಗಿ ತಿಳಿಸಿದ್ದೆ. ಕಾಂಗ್ರೆಸ್ ತನ್ನ ರಕ್ತದಲ್ಲಿ ಬ್ರಾಹ್ಮಣ ಸಮಾಜದ ಡಿಎನ್‌ಎ ಹೊಂದಿರುವ ಪಕ್ಷವಾಗಿದೆ ಎಂದು ಹೇಳಿದರು.

ದೇವತೆಗಳು ಮತ್ತು ರಾಕ್ಷಸರ ನಡುವೆ ಯುದ್ಧ ಅನಾದಿಕಾಲದಿಂದಲೂ ನಡೆಯುತ್ತಿದೆ. ಮಹರ್ಷಿ ವಿಶ್ವಾಮಿತ್ರರು ತಪಸ್ಸಿಗೆ ಕುಳಿತಾಗೆಲ್ಲ ರಾಕ್ಷಸರು ಅದನ್ನು ವಿಫಲಗೊಳಿಸಲು ಪ್ರಯತ್ನಿಸುತ್ತಿದ್ದರು. ಯಾರಾದರೂ ಶಿವನನ್ನು ಪ್ರಾರ್ಥಿಸುತ್ತಿದ್ದರೆ ಅದನ್ನು ವಿಫಲಗೊಳಿಸಲು ರಾಕ್ಷಸರೆಲ್ಲ ಸೇರುತ್ತಿದ್ದರು. ಇಂದೂ ಅದೇ ನಡೆಯುತ್ತಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಕೈಗೊಂಡಿದ್ದಾರೆ ಮತ್ತು ಬಿಜೆಪಿಯ ನಾಯಕರು ಅದನ್ನು ವಿಫಲಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದೂ ಸುರ್ಜೆವಾಲಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News