ಕೆನರಾ ಎಜುಕೇಷನ್ ಸೊಸೈಟಿ ಮಂಗಳೂರು: ನೂತನ ಪಧಾಧಿಕಾರಿಗಳ ಆಯ್ಕೆ

Update: 2018-09-06 09:56 GMT

ಮಂಗಳೂರು, ಸೆ. 6: ಕೆನರಾ ಎಜುಕೇಷನ್ ಸೊಸೈಟಿ, ಹಂಪನಕಟ್ಟೆ ಮಂಗಳೂರು ಇದರ 2018-23 ಅವಧಿಯ ನಿರ್ದೇಶಕರ ಆಡಳಿತ ಮಂಡಳಿಯಲ್ಲಿ ಪದಾಧಿಕಾರಿಗಳ ಆಯ್ಕೆ ಸಹಕಾರಿ ಸಂಘಗಳ ಚುನಾವಣಾ ಅಧಿಕಾರಿ ಎನ್. ಜೆ. ಗೋಪಾಲರು ನಡೆಸಿದರು.

 ಅಧ್ಯಕ್ಷರಾಗಿ  ರುಡೊಲ್ಫ್ ಡಿಸಿಲ್ವ ಬೆಂದೂರು, ಉಪಾಧ್ಯಕ್ಷರಾಗಿ ಸುಶೀಲ್ ನೊರೊನ್ಹ, ಕುಲಶೇಖರವರನ್ನು ಅರಿಸಲಾಯಿತು.

ಆಡಳಿತ ಮಂಡಳಿಯ ನಿರ್ದೇಶಕರಾಗಿ ಓಸ್ವಾಲ್ಡ್ ಡಿಕುನ್ಹಾ,  ಲಾರೆನ್ಸ್ ಪಿಂಟೊ,  ಅ್ಯಂಟೊನಿ ಸಲ್ದಾನಾ, ಡಾ. ಐವನ್ ಪಿಂಟೊ,  ಜೋಸೆಪ್ ರೇಗೊ, ವಿವಿಯನ್ ಸಿಕ್ವೇರಾ,  ನೊಯೆಲ್ ಲೋಬೊ,  ಸುನೀಲ್ ವಾಸ್,  ಜೇಮ್ಸ್ ಮಾಡ್ತಾ, ಮಹಿಳಾ ಪ್ರತಿನಿಧಿ  ಶಾಂತಿ ರಸ್ಕಿನ್ಹಾ ಹಾಗೂ ಸಿಂತಿಯಾ ಫಾರಯಸ್ ಆಯ್ಕೆಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News