ಬೆಲೆಬಾಳುವ ಸಾಮಗ್ರಿಗಳಿದ್ದ ಬ್ಯಾಗ್ ಮರಳಿಸಿ ಪ್ರಾಮಾಣಿಕತೆ ಮೆರೆದ ಚಾಲಕ

Update: 2018-09-06 12:58 GMT

ಮಂಗಳೂರು, ಸೆ.6: ಸಿಕ್ಕಿದ ಹ್ಯಾಂಡ್‌ಬ್ಯಾಗ್‌ನ್ನು ಮುಡಿಪುವಿನ ಅಬೂಬಕರ್ ಎಂಬವರು ಸಂಬಂಧಿಸಿದವರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.

ಬಜ್ಪೆಯ ಮಂಗಳೂರು ವಿಮಾನ ನಿಲ್ದಾಣದಿಂದ ಉಳ್ಳಾಲ ಕಡೆಗೆ ತೆರಳುತ್ತಿದ್ದ ರಿಯಾಝ್ ಉಳ್ಳಾಲ ತನ್ನ ಹ್ಯಾಂಡ್‌ಬ್ಯಾಗ್‌ನ್ನು ಪೆಟ್ರೋಲ್ ಬಂಕ್ ಬಳಿ ಬುಧವಾರ ಬೆಳಗ್ಗಿನ ಜಾವ ಕಳೆದುಕೊಂಡಿದ್ದರು. ಹಾಂಡ್‌ಬ್ಯಾಗ್‌ನಲ್ಲಿ ಹೊಸ ಮೊಬೈಲ್, ವಾಚ್, ಬೆಲೆಬಾಳುವ ಸಾಮಗ್ರಿ ಸೇರಿ 35 ಸಾವಿರ ರೂ. ಮೌಲ್ಯದ ಸಾಮಗ್ರಿಗಳು ಇದ್ದವು. ಈ ಬಗ್ಗೆ ರಿಯಾಝ್ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ರವಾನಿಸಿದ್ದರು.

ಅದೇದಿನ ಮಧ್ಯಾಹ್ನದ ವೇಳೆಗೆ ಮೀನು ಸಾಗಾಟ ವಾಹನ ಚಾಲಕ, ಮುಡಿಪುವಿನ ಅಬೂಬಕರ್ ಎಂಬವರಿಗೆ ಸಿಕ್ಕಿದೆ. ಸಾಮಾಜಿಕ ಜಾಲತಾಣದಲ್ಲಿ ಬ್ಯಾಗ್‌ವೊಂದು ನಾಪತ್ತೆಯಾಗಿರುವುದು ಅವರ ಗಮನಕ್ಕೆ ಬಂದು ವಾರಸುದಾರರಿಗೆ ತಲುಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News