ಯುನಿವೆಫ್: ಸೆ.7 ರಂದು ವಿಶೇಷ ಉಪನ್ಯಾಸ

Update: 2018-09-06 18:36 GMT

ಮಂಗಳೂರು,ಸೆ.6: ಭಾರತದ ಪ್ರಸಕ್ತ ಪರಿಸ್ಥಿತಿಯಲ್ಲಿ ಮುಸ್ಲಿಮರ ಹೊಣೆಗಾರಿಕೆ ಎಂಬ ನೆಲೆಯಲ್ಲಿ ಯುನಿವೆಫ್ ಕರ್ನಾಟಕ ವಿಶೇಷ ಉಪನ್ಯಾಸವನ್ನು ಹಮ್ಮಿಕೊಂಡಿದ್ದು, ಸೆ.7ರಂದು ಶುಕ್ರವಾರ ರಾತ್ರಿ 8:15 ಕ್ಕೆ ಯುನಿವೆಫ್ ಕರ್ನಾಟಕ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿಯವರು 'ದಾವಾ ಯಾಕೆ ಮತ್ತು ಹೇಗೆ' ಎಂಬ ವಿಷಯದಲ್ಲಿ ವಿಶೇಷ ಉಪನ್ಯಾಸ ನೀಡಲಿದ್ದಾರೆ.  

ಫಳ್ನೀರ್ ಇಂದಿರಾ ಆಸ್ಪತ್ರೆ ಬಳಿಯ ಲುಲು ಸೆಂಟರ್, ದಾರುಲ್ ಇಲ್ಮ್ ಮದ್ರಸ ಸಭಾಂಗಣದಲ್ಲಿ ಉಪನ್ಯಾಸ ಕಾರ್ಯಕ್ರಮ ನಡೆಯಲಿದ್ದು, ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಇದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಪ್ರಕಟನೆಯಲ್ಲಿ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News