ಸಂಗಾತಿ ಬೀಡಿ ಕಾರ್ಮಿಕರ ಗೃಹ ನಿರ್ಮಾಣ ಸಹಕಾರಿ ಸಂಘದ ನೂತನ ಕಚೇರಿ ಉದ್ಘಾಟನೆ
Update: 2018-09-08 11:04 GMT
ಬೆಳ್ತಂಗಡಿ, ಸೆ.8: ಬೆಳ್ತಂಗಡಿಯಲ್ಲಿ ಸಂಗಾತಿ ಎ.ಕೆ.ಜಿ ಬೀಡಿ ಕಾರ್ಮಿಕರ ಗೃಹ ನಿರ್ಮಾಣ ಸಹಕಾರಿ ಸಂಘದ ನೂತನ ಕಚೇರಿ ಇತ್ತೀಚೆಗೆ ಉದ್ಘಾಟನೆಗೊಂಡಿತು.
ಮಾಜಿ ಶಾಸಕ ಕೆ ವಸಂತ ಬಂಗೇರ ಸಂಘದ ಕಚೇರಿಯನ್ನು ಉದ್ಘಾಟಿಸಿ ಶುಭ ಹಾರೈಸಿದರು
ದ.ಕ. ಜಿಲ್ಲಾ ಸಹಕಾರಿ ಸಂಘಗಳ ಉಪನಿರ್ದೇಶಕ ಬಿ.ಕೆ.ಸಲೀಂ ಮಾತನಾಡಿ, ಶ್ರೇಷ್ಠವಾದ ಉದ್ದೇಶವನ್ನು ಇಟ್ಟುಕೊಂಡು ಕಾರ್ಮಿಕರಿಗಾಗಿ ಆರಂಭಿಸಲಾಗಿರುವ ಈ ಸಹಕಾರಿ ಸಂಘ ಕಾರ್ಮಿಕರ ಹಿತಾಸಕ್ತಿಗಳನ್ನು ಕಾಪಾಡುತ್ತಾ ಮುಂದುವರಿಯಲಿ ಎಂದರು.
ಬೆಳ್ತಂಗಡಿ ಪಿಎಲ್ಡಿ ಬ್ಯಾಂಕಿನ ಅಧ್ಯಕ್ಷ ಪ್ರವೀಣ್ ಚಂದ್ರ ಜೈನ್, ಕಾರ್ಮಿಕ ಮುಖಂಡರಾದ ವಸಂತ ಆಚಾರಿ, ಯಾದವ ಶೆಟ್ಟಿ ಮಾತನಾಡಿ ಶುಭ ಹಾರೈಸಿದರು.
ಸಂಘದ ಅಧ್ಯಕ್ಷ ಹರಿದಾಸ್ ಎಸ್.ಎಂ. ಸ್ವಾಗತಿಸಿದರು. ಉಪಾಧ್ಯಕ್ಷ ವೆಂಕಟೇಶ್ ಮಯ್ಯ, ನಿರ್ದೇಶಕರಾದ ಯಶವಂತ ಮರೋಳಿ, ಶೇಖರ ಲಾಯಿಲ, ಶಿವಕುಮಾರ್, ಸುಕನ್ಯಾ, ಸುಜಿತ್ ರಾವ್ ಹಾಗೂ ಇತರರು ಉಪಸ್ಥಿತರಿದ್ದರು.
ಆಶಾ ಸುಜಿತ್ ಕಾರ್ಯಕ್ರಮ ನಿರೂಪಿಸಿದರು