ಕಣ್ಣಂಗಾರ್ ಮಸೀದಿ ಸಮಿತಿಗೆ ಸದಸ್ಯರ ನೊಂದಣಿ

Update: 2018-09-08 12:39 GMT

ಉಡುಪಿ, ಸೆ.8: ರಾಜ್ಯ ವಕ್ಫ್ ಮಂಡಳಿಯ ನಿರ್ದೇಶನದಂತೆ ಹೆಜಮಾಡಿ ಗ್ರಾಮದ ಕಣ್ಣಂಗಾರ್ ಜುಮಾ ಮಸೀದಿಯ ಆಡಳಿತ ಸಮಿತಿಗೆ ಸದಸ್ಯರ ನೊಂದಣಿ ಪ್ರಕ್ರಿಯೆಯು ಸೆ.14ರಿಂದ ಪ್ರಾರಂಭಗೊಳ್ಳಲಿದೆ.

ಆದುದರಿಂದ ಕಣ್ಣಂಗಾರ್ ಜುಮಾ ಮಸೀದಿಯ ಅನುಮೋದಿತ ಬೈಲಾ ಪ್ರಕಾರ ಮಸೀದಿ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಜಮಾಅತ್ ನವರು ಅಧಿ ಸೂಚನೆಯಲ್ಲಿ ತಿಳಿಸಿರುವಂತೆ ನಿಗದಿತ ಸಮಯದಲ್ಲಿ ನೊಂದಣಿ ಸದಸ್ಯತ್ವವನ್ನು ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾ ವಕ್ಫ್ ಸಲಹಾ ಮಂಡಳಿಯ ಅಧ್ಯಕ್ಷ ಹಾಜಿ ಕೆ.ಪಿ.ಇಬ್ರಾಹಿಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News