‘ತೆನೆ ಹಬ್ಬದ ಜೊತೆ ಹಸಿರು ಹಬ್ಬ’ ಆಚರಣೆ

Update: 2018-09-08 12:54 GMT

ಉಡುಪಿ, ಸೆ.8: ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ಯು ಅರಣ್ಯ ಇಲಾಖೆ ಸಹಕಾರದೊಂದಿಗೆ ನಗರದ ಶೋಕಮಾತ ಚರ್ಚಿನಲ್ಲಿ ಇಂದು ತೆನೆ ಹಬ್ಬದ ಜೊತೆ ಹಸಿರು ಹಬ್ಬ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿ ಕೊಂಡಿತು.

ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರಿಗೆ ಚರ್ಚಿನ ಧರ್ಮಗುರು ಫಾ.ವಲೇರಿಯನ್ ಮೆಂಡೋನ್ಸ ತೆನೆಗುಚ್ಚ ನೀಡುವ ಮೂಲಕ ಹಸಿರು ಹಬ್ಬಕ್ಕೆ ಚಾಲನೆ ನೀಡಿದರು. ಬಳಿಕ ನಾಗರಿಕ ಸಮಿತಿಯಿಂದ ನೇರಳೆ, ನೆಲ್ಲಿ, ಕೊಕಂ, ಕಹಿಬೇವು ಮೊದಲಾದ 200 ಗಿಡಗಳನ್ನು ಉಚಿತವಾಗಿ ಸ್ಥಳದಲ್ಲಿ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಫಾ.ವಿಜಯ್ ಡಿಸೋಜ, ಚರ್ಚಿನ ಆಡಳಿತ ಮಂಡಳಿ ಪದಾಧಿಕಾರಿಗಳಾದ ಅಲ್ಫೋನ್ಸ ಡಿಕೋಸ್ತ, ಮೈಕಲ್ ಡಿಸೋಜ, ಇರ್ವಿನ್ ಆಳ್ವ, ಗ್ರೇಶನ್ ಬೊತೆಲ್ಲೋ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News