ಕುಂದಾಪುರದಲ್ಲಿ ಬಾಲ್ಯ ವಿವಾಹ: ಪ್ರಕರಣ ದಾಖಲು
Update: 2018-09-08 16:47 GMT
ಕುಂದಾಪುರ, ಸೆ.8: ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ಕುಂದಾಪುರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಹಾಗೂ ತಾಲೂಕು ಬಾಲ್ಯ ವಿವಾಹ ತಡೆ ಸಮಿತಿಯ ಸದಸ್ಯ ಕಾರ್ಯದರ್ಶಿ ನಿರಂಜನ ಭಟ್ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಲ್ಲೂರು ಗ್ರಾಮದ ನಾರಾಯಣ ಗುರು ವಿಕಲಚೇತನರ ಶಾಲೆಯ ಹತ್ತಿರದ ನಿವಾಸಿ ಭಾಗೀರಥಿ ಎಂಬವರ ಮಗ ವಿಘ್ನೇಶ(17) ಎಂಬವರಿಗೆ ಬಾಲ್ಯ ವಿವಾಹವಾಗಿರುವ ಕುರಿತ ಮಾಹಿತಿಯಂತೆ ನಿರಂಜನ್ ಭಟ್ ಮನೆಗೆ ಭೇಟಿ ನೀಡಿ ಪರಿಶೀಲಿಸಿದರು. ಬಾಲಕನ ಜನ್ಮ ದಿನಾಂಕ 2000ರ ಸೆ.1 ಆಗಿದ್ದು, 17 ವರ್ಷದ ಬಾಲಕನಿಗೆ ವಿವಾಹ ನಡೆದಿರುವುದು ಅಪರಾಧವಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.