ಭಾರತ್ ಬಂದ್‌ಗೆ ಬೆಂಬಲ: ಕಾಂಗ್ರೆಸ್ ಬ್ರಿಗೇಡ್ ಮನವಿ

Update: 2018-09-09 12:54 GMT

ಉಡುಪಿ, ಸೆ.9: ಕೇಂದ್ರ ಸರಕಾರವು ಪೆಟ್ರೋಲ್, ಡೀಸೆಲ್, ಗ್ಯಾಸ್ ಮತ್ತು ಇನ್ನಿತರ ವಸ್ತುಗಳ ದರ ಏರಿಕೆ ಮಾಡಿರುವುದನ್ನು ಖಂಡಿಸಿರುವ ಉಡುಪಿ ಜಿಲ್ಲಾ ನ್ಯಾಷನಲ್ ಕಾಂಗ್ರೆಸ್ ಬ್ರಿಗೇಡ್, ದೇಶದ ಅಭಿವೃದ್ಧಿ ಮತ್ತು ದರ ಇಳಿಕೆಗಾಗಿ ನಾಳಿನ ಭಾರತ್ ಬಂದ್‌ಗೆ ಬೆಂಬಲ ನೀಡುವಂತೆ ಮನವಿ ಮಾಡಿದೆ.

ಅಧಿಕಾರಕ್ಕೆ ಬಂದಂತಹ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು, ಪೆಟ್ರೊಲ್, ಗ್ಯಾಸ್, ಡೀಸೆಲ್ ಮತ್ತು ಇನ್ನಿತರ ವಸ್ತುಗಳ ದರ ಏರಿಕೆ ಮಾಡುತ್ತಿದೆ. ಆದುದ ರಿಂದ ಕೂಡಲೇ ಇವುಗಳ ಬೆಲೆಯನ್ನು ಇಳಿಕೆ ಮಾಡುವುದರೊಂದಿಗೆ ಜನರ ಹೊರೆಯನ್ನು ಇಳಿಸಬೇಕು ಎಂದು ನ್ಯಾಷನಲ್ ಕಾಂಗ್ರೆಸ್ ಬ್ರಿಗೇಡ್‌ನ ಜಿಲ್ಲಾಧ್ಯಕ್ಷ ಸ್ಟೀವನ್ ಕುಲಾಸೊ ಉದ್ಯಾವರ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News