ಉಡುಪಿ ಜಿಲ್ಲಾ ಸಿಟಿಬಸ್ ನೌಕರರ ಸಂಘ ಬೆಂಬಲ

Update: 2018-09-09 13:01 GMT

ಉಡುಪಿ, ಸೆ. 9: ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ಬೆಲೆ ಏರಿಕೆ ಯಿಂದ ಸಿಟಿ ಬಸ್ ನೌಕರರಿಗೆ ಆರ್ಥಿಕವಾಗಿ ಹೊರೆಯಾಗಿದೆ. ಈ ಹಿನ್ನೆಲೆ ಯಲ್ಲಿ ಉಡುಪಿ ಜಿಲ್ಲಾ ಸಿಟಿ ಬಸ್ ನೌಕರರ ಸಂಘ(ಸಿಐಟಿಯು)ವು ಸೋಮ ವಾರದ ಹರತಾಳಕ್ಕೆ ಸಂಪೂರ್ಣ ಬೆಂಬಲ ಘೋಷಿಸಿದೆ. ನೌಕರರ ವೇತನ ಹೆಚ್ಚಳವಾಗುತ್ತಿಲ್ಲ.

ಪಿಎಫ್, ಇಎಸ್‌ಐ, ಪಿಂಚಣಿ ಸೌಲಭ್ಯ ಗಳಿಲ್ಲ. ನಷ್ಟದಲ್ಲಿರುವ ಬಸ್ ಮಾಲಕರು ಬಸ್‌ಗಳನ್ನು ಮಾರಾಟ ಮಾಡುತ್ತಿದ್ದು, ನೌಕರರು ಕೆಲಸ ಕಳೆದು ಕೊಳ್ಳುವಂತಾಗಿದೆ. ಹರತಾಳಕ್ಕೆ ಬೆಂಬಲ ನೀಡಿರುವು ದರಿಂದ ಸಾರ್ವಜನಿಕರಿಗೆ ಆಗುವ ಅನಾನುಕೂಲಕ್ಕೆ ಸಂಘ ವಿಷಾದಿಸುತ್ತದೆ ಎಂದು ಸಂಘದ ಜತೆ ಕಾರ್ಯದರ್ಶಿ ಸಂತೋ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News