ಬೈಂದೂರು: ಮೀನುಗಾರಿಕೆ ವೇಳೆ ಮೃತ್ಯು

Update: 2018-09-09 16:44 GMT

ಬೈಂದೂರು, ಸೆ.9: ಶನಿವಾರ ನಸುಕಿನಲ್ಲಿ ಗಂಗೊಳ್ಳಿ ಸಮುದ್ರದಲ್ಲಿ ಮೀನುಗಾರಿಕೆಯಲ್ಲಿ ನಿರತರಾಗಿದ್ದ ಆದ್ರಗೋಳಿ ಕಿರಿಮಂಜೇಶ್ವರ ಗ್ರಾಮದ ವೀರಭದ್ರ (29) ಎಂಬವರು ಎದೆನೋವಿನಿಂದ ಕುಸಿದಿದ್ದು, ತಕ್ಷಣ ಅವರನ್ನು ಚಿಕಿತ್ಸೆಗಾಗಿ ಬೈಂದೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಪರೀಕ್ಷಿಸಿದ ವೈದ್ಯರು ದಾರಿ ಮಧ್ಯೆಯೇ ಅವರು ಮೃತಪಟ್ಟಿರುವುದಾಗಿ ಘೋಷಿಸಿದರು.

ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News