ಉಡುಪಿ: ತೈಲಬೆಲೆ ಏರಿಕೆ ಖಂಡಿಸಿ ರಿಕ್ಷಾ ತಳ್ಳಿ ಪ್ರತಿಭಟನೆ

Update: 2018-09-10 14:43 GMT

ಉಡುಪಿ, ಸೆ.10: ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ಖಂಡಿಸಿ ಕರೆ ನೀಡಿ ರುವ ಸೋಮವಾರದ ಭಾರತ್ ಬಂದ್ ಸಂದರ್ಭ ಉಡುಪಿ ಜಿಲ್ಲಾ ಆಶ್ರಯ ದಾತ ಅಟೋ ಯೂನಿಯನ್ ನೇತೃತ್ವದಲ್ಲಿ ಚಾಲಕರು ತಮ್ಮ ರಿಕ್ಷಾವನ್ನು ತಳ್ಳಿಕೊಂಡು ಹೋಗುವ ಮೂಲಕ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಸರ್ವಿಸ್ ಬಸ್ ನಿಲ್ದಾಣದಿಂದ ಕ್ಲಾಕ್ ಟವರ್, ಕಿದಿಯೂರು ಹೊಟೇಲ್ ಮಾರ್ಗವಾಗಿ ಸಿಟಿ ಬಸ್ ನಿಲ್ದಾಣದವರೆಗೆ ಸುಮಾರು 15ಕ್ಕೂ ಅಧಿಕ ರಿಕ್ಷಾಗಳನ್ನು ಚಾಲಕರು ತಳ್ಳಿಕೊಂಡು ಹೋದರು. ಈ ಸಂದರ್ಭದಲ್ಲಿ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿ ಶಿವಾನಂದ ಮೂಡಬೆಟ್ಟು, ಜಿಲ್ಲಾ ನಾಗರಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ಮೊದ ಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News