ಭಾರತ್ ಬಂದ್: ಸಿಪಿಎಂ ಅಭಿನಂದನೆ

Update: 2018-09-10 14:43 GMT

ಉಡುಪಿ, ಸೆ.10: ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ಬೆಲೆ ಏರಿಕೆ ವಿರುದ್ಧ, ರಫೆಲ್ ವಿಮಾನ ಖರೀದಿ ಹಗರಣ, ರೈತರ ಸಾಲ ಮನ್ನಾ ಸಮಸ್ಯೆಗಳ ಪರಿಹಾರಕ್ಕಾಗಿ ದೇಶದಾದ್ಯಂತ ನಡೆಯುತ್ತಿರುವ ಹರತಾಳಕ್ಕೆ ಬೆಂಬಲ ನೀಡಿದ ಉಡುಪಿಯ ಜನತೆಯನ್ನು ಸಿಪಿಐಎಂ ಅಭಿನಂದಿಸಿದೆ.

ಸ್ವಯಂ ಪ್ರೇರಿತರಾಗಿ ವ್ಯಾಪಾರ ವಹಿವಾಟುಗಳನ್ಮು ನಿಲ್ಲಿಸಿದ ವ್ಯಾಪಾರಸ್ಥರಿಗೆ ಅಭಿನಂದನೆಗಳು. ಜನತೆಯ ಆಕ್ರೋಶವನ್ನು ಗಮನಿಸಿಯಾದರೂ ಕೇಂದ್ರ ಮತ್ತು ರಾಜ್ಯ ಸರಕಾರಗಳು ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ಇಳಿಸ ಬೇಕು ಹಾಗೂ ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ನಿಗದಿಗೊಳಿಸಬೇಕೆಂದು ಸಿಪಿಎಂ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News