ಪಡುಬಿದ್ರಿ: ಮೀನು ಹಿಡಿಯುವ ವೇಳೆ ಸಮುದ್ರ ಪಾಲು

Update: 2018-09-10 14:52 GMT

ಪಡುಬಿದ್ರಿ, ಸೆ. 10: ಸಮುದ್ರದಲ್ಲಿ ಬಲೆ ಬೀಸಿ ಮೀನು ಹಿಡಿಯುತಿದ್ದ ವೇಳೆ ಸಮುದ್ರದ ಅಲೆಗೆ ಸಿಲುಕಿ ವ್ಯಕ್ತಿಯೋರ್ವರು ಮೃತ ಪಟ್ಟ ಘಟನೆ ಉಚ್ಚಿಲ ಬಡಾಗ್ರಾಮದ ಮಾಡಕಲ್ಲು ಬಳಿ ನಡೆದಿದೆ.

ಮೃತ ವ್ಯಕ್ತಿ ಉಚ್ಚಿಲ ನಿವಾಸಿ ರಮೇಶ್ ಜಿ ಕೋಟ್ಯಾನ್ (70) ಎಂದು ತಿಳಿದು ಬಂದಿದೆ. 

ಇವರು ಸೋಮವಾರ ಮಧ್ಯಾಹ್ನ  ಊಟ ಮಾಡಿದ ಬಳಿಕ ಮಾಡಕಲ್ಲು ಬಳಿ ಮೀನು ಹಿಡಿಯಲು ಬಲೆಯೊಂದಿಗೆ ತೆರಳಿದ್ದರು. ನೀರಿನಲ್ಲಿ ಅಬ್ಬರದ ಅಲೆಗೆ ಸಿಲುಕಿ ಅವರು ಮೃತಪಟ್ಟಿರಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ. ಮೃತದೇಹವನ್ನು ಸ್ಥಳೀಯರು ದಡಕ್ಕೆ ತಂದಿದ್ದಾರೆ.

 ಘಟನಾ ಸ್ಥಳಕ್ಕೆ ಕಾಪು ಶಾಸಕ ಲಾಲಾಜಿ ಮೆಂಡನ್ ಆಗಮಿಸಿ, ಸಂಬಂದಿಕರಿಗೆ ಸಾಂತ್ವನ ಹೇಳಿದ್ದಾರೆ. ಮೃತರು ಇಬ್ಬರು ಪುತ್ರರು ಹಾಗು ಓರ್ವ ಪುತ್ರಿಯನ್ನು ಅಗಲಿದ್ದಾರೆ. 

ಪಡುಬಿದ್ರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News