ಮೂಡಂಬೈಲು : ಹೊಳೆ ದಾಟುತ್ತಿದ್ದ ಯುವಕ ನೀರು ಪಾಲು

Update: 2018-09-10 14:54 GMT

ಮಂಜೇಶ್ವರ, ಸೆ. 10: ಇಲ್ಲಿಗೆ ಸಮೀಪದ ಮೂಡಂಬೈಲು ಪಡತ್ತೂರಿನಲ್ಲಿ ಹೊಳೆ ದಾಟುತ್ತಿದ್ದ ಯುವಕನೋರ್ವ ನೀರು ಪಾಲಾದ ಘಟನೆ ವರದಿಯಾಗಿದೆ.

ದಿ. ರಾಮ ಬೆಲ್ಚಾಡ ಎಂಬವರ ಪುತ್ರ ಮನೋಜ್ (25) ನೀರು ಪಾಲಾದ ಯುವಕ.

ಸೋಮವಾರ ಮಧ್ಯಾಹ್ನ ಹೊಳೆ ದಾಟುತ್ತಿದ್ದ ವೇಳೆ ಈತ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆಂದು ತಿಳಿದು ಬಂದಿದೆ. ಉಪ್ಪಳದಿಂದ ತಲುಪಿದ ಅಗ್ನಿ ಶಾಮಕ ದಳ ಹಾಗೂ ನಾಗರಿಕರು ಹುಡುಕಾಟ ನಡೆಸಿ ಮೃತದೇಹವನ್ನು ಹೊಳೆಯಿಂದ ಮೇಲಕ್ಕೆತ್ತಿದ್ದಾರೆ.

ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News