ಉಡುಪಿಗೆ ಎಸ್ಪಿ ಅಣ್ಣಾಮಲೈ ಭೇಟಿ
Update: 2018-09-10 15:17 GMT
ಉಡುಪಿ, ಸೆ.10: ಉಡುಪಿಯಲ್ಲಿ ನಡೆದ ಘರ್ಷಣೆ ಹಾಗೂ ಲಾಠಿಚಾರ್ಜ್ ಹಿನ್ನೆಲೆಯಲ್ಲಿ ಎಡಿಜಿಪಿಯ ಆದೇಶದಂತೆ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಅಧೀಕ್ಷಕ ಅಣ್ಣಾಮಲೈ ಇಂದು ಉಡುಪಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.
ಉಡುಪಿಗೆ ಆಗಮಿಸಿದ ಅಣ್ಣಾಮಲೈ, ಸಂಜೆ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ತೆರಳಿ ಗಾಯಾಳುಗಳನ್ನು ವಿಚಾರಿಸಿದರು. ಬಳಿಕ ಅವರು ಎಸ್ಪಿ ಕಚೇರಿಗೆ ತೆರಳಿ ಇಡೀ ಘಟನೆಯ ಕುರಿತು ಮಾಹಿತಿ ಪಡೆದು ಕೊಂಡಿದ್ದಾರೆ. ಈ ಕುರಿತ ವರದಿಯನ್ನು ಅಣ್ಣಾಮಲೈ ಎಡಿಜಿಪಿಗೆ ಸಲ್ಲಿಲಿದ್ದಾರೆ ಎಂದು ಮೂಲಗಳು ತಿಳಿಸಿವೆ.