ಕಲಿಕೆಯಲ್ಲಿ ನಿರಾಸಕ್ತಿ: ವಿದ್ಯಾರ್ಥಿ ಆತ್ಮಹತ್ಯೆ
Update: 2018-09-10 15:19 GMT
ಉಡುಪಿ, ಸೆ.10: ವಿದ್ಯಾಭ್ಯಾಸ ಮುಂದುವರಿಸಲು ಇಷ್ಟವಿಲ್ಲದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಆದಿಉಡುಪಿ ಪಂದುಬೆಟ್ಟು ಎಂಬಲ್ಲಿ ಸೆ.9ರಂದು ಸಂಜೆ ವೇಳೆ ನಡೆದಿದೆ.
ಮೃತರನ್ನು ರಾಜಸ್ಥಾನ ಮೂಲದ ಕರಣ ರಾಮ್ ಎಂಬವರ ಮಗ ಗುಣೇಶ್ ರಾಮ್(15) ಎಂದು ಗುರುತಿಸಲಾಗಿದೆ. ಇವರು ಪಂದುಬೆಟ್ಟುವಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ವಿದ್ಯಾಭ್ಯಾಸ ಮುಂದುವರಿಸಲು ಇಷ್ಟವಿಲ್ಲದ ಈತ ಜೀವನದಲ್ಲಿ ಜಿಗುಪ್ಸೆ ಹೊಂದಿ ಮನೆಯ ಅಡುಗೆ ಕೋಣೆಯ ಸೀಲಿಂಗ್ ಹುಕ್ಸ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.