ಗಣೇಶ ಚತುರ್ಥಿ ಆಕರ್ಷಣೆ: ಬೃಹತ್ ಧಾನ್ಯ ಗಣೇಶ

Update: 2018-09-10 15:21 GMT

ಉಡುಪಿ, ಸೆ.10: ಮಣಿಪಾಲ ಸ್ಯಾಂಡ್‌ಹಾರ್ಟ್ ಕಲಾವಿದರಾದ ಶ್ರೀನಾಥ್ ಮಣಿಪಾಲ್, ರವಿ ಹಿರೆಬೆಟ್ಟು ಈ ಬಾರಿ ಗಣೇಶ ಚೌತಿಯವಿಶಿಷ್ಟವಾದ ‘ಧಾನ್ಯ ಗಣೇಶ’ ಕಲಾಕೃತಿಯನ್ನು ಉಡುಪಿಯ ವಿದ್ಯಾಸಮುದ್ರ ರಸ್ತೆಯಲ್ಲಿರುವ ಸಾಯಿರಾಧ ಮೋಟಾರ್ಸ್‌ನಲ್ಲಿ ಸಾರ್ವಜನಿಕರಿಗೆ ಪ್ರದರ್ಶನಕ್ಕಿಡಲಿದ್ದಾರೆ.

ಸಾಧಾರಣ 12 ಅಡಿ ಎತ್ತರದ ಈ ಕಲಾಕೃತಿಯು ಗಣೀಶ ಚತುರ್ಥಿಯ ಈ ಬಾರಿಯ ವಿಶೇಷ ಆಕರ್ಷಣೆಯಾಗಲಿದೆ ಎಂದು ಕಲಾವಿದ ಶೀನಾಥ್ ಮಣಿಪಾಲ್ ತಿಳಿಸಿದ್ದಾರೆ. ಈ ಮೊದಲು ಇದೇ ಕಲಾವಿದರು ಪೇಪರ್ ಕಪ್ ಗಣೇಶ, ಬಿಸ್ಕೆಟ್ ಗಣೇಶ, ಗುಡಿ ಕೈಗಾರಿಕಾ ವಸ್ತುಗಳ ಗಣೇಶ ಕಲಾಕೃತಿಗಳು ಚೌತಿ ಸಮಯದಲ್ಲಿ ಉಡುಪಿಯ ಪ್ರಮುಖಆಕರ್ಷಣೆಯಾಗಿತ್ತು.

ಸೆ.12ರಂದು ಸಂಜೆ 5 ಗಂಟೆಗೆ ಈ ಕಲಾಕೃತಿಯು ಅನಾವರಣ ಗೊಳ್ಳಲಿದೆ. ಕಲಾಕೃತಿಯು10ದಿನಗಳವರೆಗೆ ಸಾರ್ವಜನಿಕರ ವೀಕ್ಷಣೆಗೆ ಲಭ್ಯ ವಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News