ಆಲಂಕಾರು: ಮಗನಿಗೆ ಕತ್ತಿಯಿಂದ ಕಡಿದು ಆತ್ಮಹತ್ಯೆಗೆ ಶರಣಾದ ತಂದೆ
Update: 2018-09-12 07:12 GMT
ಕಡಬ, ಸೆ.12. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿಯೋರ್ವರು ತನ್ನ ಮಗನಿಗೆ ಕತ್ತಿಯನ್ನು ಕಡಿದು ಬಳಿಕ ತನ್ನ ಕುತ್ತಿಗೆ ಹಾಗೂ ಮರ್ಮಾಂಗಕ್ಕೆ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ಆಲಂಕಾರಿನಲ್ಲಿ ಬುಧವಾರ ನಡೆದಿದೆ.
ಆಲಂಕಾರು ಗ್ರಾಮದ ಪಟ್ಟೆಮಜಲು ನಿವಾಸಿ ರಾಜೀವ್ ಪೂಜಾರಿ (45) ತನ್ನ ಪುತ್ರ ರತನ್ ಗೆ ಕತ್ತಿಯಿಂದ ಕಡಿದಿದ್ದು, ಬಳಿಕ ಕತ್ತಿಯಿಂದ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗಾಯಾಳು ರತನ್ ನನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.