ನಾಳೆಯ ಎಸ್‌ಎಡಿ ರ್ಯಾಲಿಗೆ ಹೈಕೋರ್ಟ್ ಅನುಮತಿ

Update: 2018-09-15 13:43 GMT

ಚಂಡಿಗಡ,ಸೆ.15: ಶಿರೋಮಣಿ ಅಕಾಲಿ ದಳ(ಎಸ್‌ಎಡಿ)ವು ಫರೀದಕೋಟ್‌ನಲ್ಲಿ ರವಿವಾರ ತನ್ನ ‘ಪೋಲ್ ಖೋಲ್(ಬಂಡವಾಳ ಬಯಲಿಗೆಳೆ)’ ರ್ಯಾಲಿಯನ್ನು ನಡೆಸಲು ಪಂಜಾಬ್ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯವು ಶನಿವಾರ ಅನುಮತಿಯನ್ನು ನೀಡಿದೆ.

ಜೊತೆಗೆ ರ್ಯಾಲಿಯ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸಾಕಷ್ಟು ಭದ್ರತೆಯನ್ನೊದಗಿಸುವಂತೆ ನ್ಯಾ.ಆರ್.ಕೆ.ಜೈನ್ ಅವರ ಏಕಸದಸ್ಯ ಪೀಠವು ಪಂಜಾಬ್ ಸರಕಾರಕ್ಕೆ ನಿರ್ದೇಶ ನೀಡಿದೆ.

 ಫರೀದಕೋಟ್ ಉಪ ವಿಭಾಗಾಧಿಕಾರಿಗಳು ರ್ಯಾಲಿಗೆ ಅನುಮತಿಯನ್ನು ನೀಡಲು ನಿರಾಕರಿಸಿದ್ದರು. ಇದನ್ನು ಪ್ರಶ್ನಿಸಿ ಶುಕ್ರವಾರ ಹೈಕೋರ್ಟ್ ಮೆಟ್ಟಿಲನ್ನೇರಿದ್ದ ಎಸ್‌ಎಡಿ,ರ್ಯಾಲಿಯನ್ನು ನಡೆಸಲು ಅನುಮತಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶಿಸುವಂತೆ ಕೋರಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News