ಪಕ್ಕಲಡ್ಕ ರಸ್ತೆ ಕಾಮಗಾರಿ ವಿಳಂಬ ಖಂಡಿಸಿ ಪ್ರತಿಭಟನೆ

Update: 2018-09-17 13:00 GMT

ಮಂಗಳೂರು, ಸೆ.17: ಪಡೀಲ್ ಬಜಾಲ್ ಮುಖ್ಯರಸ್ತೆಯ ಜೆ.ಎಂ.ರೋಡ್‌ನಿಂದ ಪಕ್ಕಲಡ್ಕದವರೆಗೆ ರಸ್ತೆ ಕಾಂಕ್ರಿಟೀಕರಣಗೊಳಿಸಲು ವಿಳಂಬಿಸುವ ನೀತಿಯನ್ನು ಖಂಡಿಸಿ ಡಿವೈಎಫ್‌ಐ ಸ್ಥಳೀಯ ಘಟಕದ ವತಿಯಿಂದ ಸೋಮವಾರ ಪಕ್ಕಲಡ್ಕದಲ್ಲಿ ಪ್ರತಿಭಟನೆ ನಡೆಸಲಾಯಿತು.

ಡಿವೈಎಫ್‌ಐ ಮಾಜಿ ರಾಜ್ಯಾಧ್ಯಕ್ಷ, ಕಾರ್ಮಿಕ ಮುಖಂಡ ಸುನೀಲ್ ಕುಮಾರ್ ಬಜಾಲ್ ಮಾತನಾಡಿ ಈ ರಸ್ತೆ ಕಾಮಗಾರಿ ಆರಂಭಿಸಿ ಮೂರು ತಿಂಗಳು ಕಳೆದಿದೆ. ಆದರೂ ಇನ್ನೂ ಪೂರ್ತಿಗೊಂಡಿಲ್ಲ. ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಜನರ ಕಾಳಜಿಗಿಂತಲೂ ಕಮೀಷನ್ ಮೇಲಿನ ಆಸೆಯಿಂದ ರಸ್ತೆ ನಿರ್ಮಿಸಲು ವಿಳಂಬಿಸಲಾಗುತ್ತಿದೆ ಎಂದು ಆರೋಪಿಸಿದರು.

ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಡಿವೈಎಫ್‌ಐ ಬಜಾಲ್ ಘಟಕ ಅಧ್ಯಕ್ಷ ರಿತೇಶ್ ಪಕ್ಕಲಡ್ಕ, ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ, ದೀಪಕ್, ನಾಗರಾಜ್, ಧೀರಜ್, ದೀಕ್ಷಿತ್, ವರಪ್ರಸಾದ್, ಸೋನಿಲ್ ಉಪಸ್ಥಿತರಿದ್ದರು.

ಪ್ರತಿಭಟನಾ ವೇಳೆ ಸ್ಥಳಕ್ಕಾಗಮಿಸಿದ ಮಂಗಳೂರು ನಗರ ಪಾಲಿಕೆಯ ಇಂಜನಿಯರ್ ಗಣಪತಿ ಮನವಿ ಸ್ವೀಕರಿಸಿದರಲ್ಲದೆ, ತಿಂಗಳೊಳಗೆ ಎಲ್ಲಾ ಕೆಲಸ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News