ಮುಳ್ಳೇರಿಯಾ: ಅಪಘಾತದ ಗಾಯಾಳು ವಿದ್ಯಾರ್ಥಿ ಮೃತ್ಯು

Update: 2018-09-18 04:07 GMT

ಕಾಸರಗೋಡು, ಸೆ.18: ಬೈಕ್‌ಗಳು ಪರಸ್ಪರ ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ದ ಪದವಿ ಕಾಲೇಜು ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಮುಳ್ಳೇರಿಯ ಬಳಿ ನಡೆದಿದೆ. ಕಾರಡ್ಕ ಪೆರಿಯಡ್ಕದ ಪಿ.ಸ್ವರಾಜ್(19) ಮೃತಪಟ್ಟ ವಿದ್ಯಾರ್ಥಿ.

ರವಿವಾರ ಬೆಳಗ್ಗೆ ಈ ಅಪಘಾತ ಸಂಭವಿಸಿತ್ತು. ಗಂಭೀರ ಗಾಯಗೊಂಡಿದ್ದ ಸ್ವರಾಜ್‌ರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಸ್ವರಾಜ್ ಚಿಕಿತ್ಸೆಗೆ ಸ್ಪಂದಿಸದೆ ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ.

 ಸ್ವರಾಜ್ ಕಾಸರಗೋಡು ವಿದ್ಯಾನಗರದ ಖಾಸಗಿ ಪದವಿ ಕಾಲೇಜಿನ ಬಿಕಾಂ ವಿದ್ಯಾರ್ಥಿಯಾಗಿದ್ದರು.

ಅಪಘಾತದಲ್ಲಿ ಇನ್ನೊಂದು ಬೈಕ್ ಸವಾರರಾದ ಅಡ್ಕದ ವೈಶಾಖ್ ಹಾಗೂ ಕುಂಬ್ಡಾಜೆ ಮಾರ್ಪನಡ್ಕದ ಸುರೇಂದ್ರ ಎಂಬವರು ಗಾಯಗೊಂಡಿದ್ದರು. ಅವರನ್ನು ಕಾಸರಗೋಡು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News