ಚಿಕ್ಕಮಗಳೂರು: ಪೀಸ್ ಆ್ಯಂಡ್ ಅವೆರ್ನೆಸ್ ಟ್ರಸ್ಟ್ ವತಿಯಿಂದ ರಕ್ತದಾನ ಶಿಬಿರ

Update: 2018-09-18 12:02 GMT

ಚಿಕ್ಕಮಗಳೂರು, ಸೆ. 18: ತಾಲ್ಲೂಕಿನ ಭೂತನಕಾಡು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಪೀಸ್ ಆ್ಯಂಡ್ ಅವೆರ್ನೆಸ್ ಟ್ರಸ್ಟ್ ವತಿಯಿಂದ 'ಊರುದ ಜವನೇರ್ ಫ್ರೆಂಡ್ಸ್' ಸಹಕಾರದಲ್ಲಿ ರಕ್ತದಾನ ಶಿಬಿರ ನಡೆಯಿತು.

ರಕ್ತದಾನ ಶಿಬಿರದ ಉದ್ಘಾಟನೆಯನ್ನು  ಚಿಕ್ಕಮಗಳೂರು ರಕ್ತದಾನ ಘಟಕದ ಮುಖ್ಯಸ್ಥ ಡಾ. ಮುರಳೀಧರ್ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರಾದ ಆನಂದ್  ವಹಿಸಿದ್ದರು.

ಕಾರ್ಯಕ್ರಮದ ವೇದಿಕೆಯಲ್ಲಿ ಪೀಸ್ ಆ್ಯಂಡ್ ಅವೆರ್ನೆಸ್ ಟ್ರಸ್ಟಿನ ಸಂಸ್ಥಾಪಕರಾದ ಅಲ್ತಾಫ್ ಬಿಳಗುಳ,  ಪತ್ರಕರ್ತ ನಂದೀಶ್ ಬಂಕೇನಹಳ್ಳಿ, ಉದ್ಯಮಿ ಇಸಾಕ್, ಗ್ರಾಮ ಪಂ. ಸದಸ್ಯ ಧ್ರುವಕುಮಾರ್, ಸುಮಿತ್ರ, ಸತ್ಯ ನಾರಾಯಣ, ಕುಸುಮ, ಪೀಸ್ ಆ್ಯಂಡ್ ಅವೆರ್ನೆಸ್ ಟ್ರಸ್ಟಿ ಸದಸ್ಯರಾದ ಆಸೀಫ್, ಶಾಲಾಭಿವೃಧ್ದಿ ಅಧ್ಯಕ್ಷ ಬಾಬು, ಶಿಕ್ಷಕರಾದ ಗುಲ್ನಾಝ್ ಬೇಗಂ, ರುಕ್ಷಾನ ಭಾನು, ಸ್ಥಳಿಯರಾದ ಗೆಲ್ಲೇಶ, ರಜಿ, ಯೋಗೇಶ್,  ಭೂತನಕಾಡು ಗಣಪತಿ ಸೇವಾ ಸಮಿತಿ ಅಧ್ಯಕ್ಷ ಮಂಜುನಾಥ, ಊರುದ ಜವನೇರ್ ಫ್ರೆಂಡ್ಸ್ ನ ಸದಸ್ಯ ಮಂಜುನಾಥ  ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ಟ್ರಸ್ಟಿನ ಸದಸ್ಯರಾದ ಆಶೀಕ್ ಹಂಡುಗುಳಿ ನಿರ್ವಹಿಸಿದರು. ಶಿಬಿರದಲ್ಲಿ 40 ಮಂದಿ ರಕ್ತದಾನ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News