ತೊಕ್ಕೊಟ್ಟು: ರಸ್ತೆ ಅಪಘಾತಕ್ಕೆ ಕೇರಳ ಮೂಲದ ಓರ್ವ ಬಲಿ; 6 ಮಂದಿಗೆ ಗಾಯ
Update: 2018-09-19 03:39 GMT
ತೊಕ್ಕೊಟ್ಟು, ಸೆ. 19: ತೊಕ್ಕೊಟ್ಟು ಸಮೀಪ ನಡೆದ ರಸ್ತೆ ಅಪಘಾತಕ್ಕೆ ಕೇರಳ ಮೂಲದ ಓರ್ವ ಮೃತಪಟ್ಟು, ಆರು ಮಂದಿ ಗಾಯಗೊಂಡ ಘಟನೆ ತಡರಾತ್ರಿ ನಡೆದಿದೆ.
ಮೃತರನ್ನು ಅನೂಪ್ (23) ಎಂದು ಗುರುತಿಸಲಾಗಿದೆ. ಅವರು ಸೋಮೇಶ್ವರ ಬೀಚಲ್ಲಿ ಪಾರ್ಟಿ ಮುಗಿಸಿ ಹಿಂತಿರುಗುವಾಗ ಅಪಘಾತ ನಡೆದಿರುವುದಾಗಿ ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಇಲ್ಲಿನ ಠಾಣೆ ಪೊಲೀಸರು ತೆರಳಿದ್ದು, ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದುಬರಬೇಕಿದೆ.