​ಪತ್ರಕರ್ತರು ಸಮಾಜದ ಕಣ್ಣುಗಳಿದ್ದಂತೆ -ಅತೀ.ವಂ.ಪೀಟರ್ ಪಾವ್ಲ್ ಸಲ್ದಾನಾ

Update: 2018-09-19 16:59 GMT

ಮಂಗಳೂರು, ಸೆ.19: ಪತ್ರಕರ್ತರು ಸಮಾಜದ ಕಣ್ಣುಗಳಿದ್ದಂತೆ ಇರುವವರು. ಸಮಾಜದ ಅಂಕು ಡೊಂಕುಗಳನ್ನು ತಿದ್ದುವವರು ಎಂದು ಅತೀ.ವಂ.ಪೀಟರ್ ಪಾವ್ಲ್ ಸಲ್ದಾನಾ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳ ಜೊತೆ ನೂತನವಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಬಿಷಪ್ ಹೌಸ್‌ನಲ್ಲಿಂದು ಅವರು ಸಮಾಲೋಚನೆ ನಡೆಸಿದರು. ಮಾಧ್ಯಮಗಳು ಈ ಹಿಂದೆಯೂ ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಾ ಬಂದಿವೆ, ಇನ್ನು ಮುಂದೆಯೂ ಉತ್ತಮ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ತಮ್ಮ ಸಲಹೆ ಸಹಕಾರ ಅಗತ್ಯವಿದೆ.

ಸಮಾಜದಲ್ಲಿ ಮಾನವೀಯ ವೌಲ್ಯಗಳ ರಕ್ಷಣೆಗಾಗಿ ಮಾಧ್ಯಮಗಳು ಕಾರ್ಯನಿರ್ವಹಿಸುವಂತಾಗಲಿ ಎಂದು ಹಾರೈಸಿದರು.*ಪತ್ರ ಕರ್ತರಿಂದ ನೂತನ ಬಿಷಪ್‌ರಿಗೆ ಗೌರವ ಸಲ್ಲಿಕೆ:-ಇದೇ ಸಂದರ್ಭದಲ್ಲಿ ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ ನೇತೃತ್ವದಲ್ಲಿ ನೂತನ ಬಿಷಪ್‌ರನ್ನು ಸ್ವಾಗತಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಜಗನ್ನಾಥ ಶೆಟ್ಟಿ ಬಾಳ, ಹಿಲರಿ ಕ್ರಾಸ್ತಾ, ರೆಮಂಡ್ ಡಿಕುನ್ನಾ, ಭಾಸ್ಕರ ರೈ, ಪುಷ್ಪರಾಜ್.ಬಿ.ಎನ್, ಇಬ್ರಾಹೀಂ ಅಡ್ಕಸ್ಥಳ, ಜಿತೇಂದ್ರ ಕುಂದೇಶ್ವರ, ಹರೀಶ್ ಮೋಟುಕಾನ, ದಯಾನಂದ ಕುಕ್ಕಾಜೆ, ಜೀವನ್‌ ಮೊದಲಾದವರು ಉಪಸ್ಥಿತರಿದ್ದರು.

ಕ್ರೈಸ್ತ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ವಂ.ವಿಕ್ಟರ್ ವಿಜಯ್ ಲೋಬೊ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News