ಕೋಡಿ ಬ್ಯಾರೀಸ್‍ನಲ್ಲಿ ಕುಮಾರವ್ಯಾಸ ಕಾವ್ಯದ ಗಮಕಗಾಯನ ಕಾರ್ಯಕ್ರಮ

Update: 2018-09-20 12:04 GMT

ಕೋಡಿ,ಸೆ.20: ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜು, ಕೋಡಿ ಕುಂದಾಪುರ ಇದರ  ಸಾಂಸ್ಕೃತಿಕ ಘಟಕ ‘ಕಡಲಸಿರಿ’ ವತಿಯಿಂದ ಕುಮಾರವ್ಯಾಸ ಕಾವ್ಯದ ಗಮಕಗಾಯನ ನೆರವೇರಿತು. ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಭಾಗವತರಾದ ಶ್ರೀ ಕರುಣಾಕರ ಆಚಾರ್ಯ ಕೋಟೇಶ್ಯರ ಇವರ ಗಾಯನಕ್ಕೆ ಕಡಲಸಿರಿ ಸಂಘಟಕ ಹಾಗೂ ಕನ್ನಡ ಉಪನ್ಯಾಸಕರಾಗಿರುವ ಮಾನ್ಯ ಶ್ರೀ ಸಂದೀಪ ಕುಮಾರ ಶೆಟ್ಟಿ ಯವರ ಅರ್ಥಗಾರಿಕೆ  ಮೆರುಗು ನೀಡಿತು. 

ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಮೀರ ಕಾರ್ಯಕ್ರಮದ  ಅಧ್ಯಕ್ಷತೆ ವಹಿಸಿದ್ದರು. ಕಡಲಸಿರಿ ಘಟಕದ  ವಿದ್ಯಾರ್ಥಿನಿ ಕಾರ್ಯದರ್ಶಿ ಸಂಪ್ರೀತ ತೃತೀಯ ಬಿ. ಕಾಂ ಇವರು ಭಾಗವತರನ್ನು ಸಭೆಗೆ ಪರಿಚಯಿಸಿದರು. ವಿದ್ಯಾರ್ಥಿನಿ ಭವ್ಯ ,ತೃತೀಯ ಬಿ.ಕಾಂ.ಸ್ವಾಗತಿಸಿದರು. ಅಷ್ಪಾಕ್ ತೃತೀಯ ಬಿ.ಕಾಂ ವಂದಿಸಿದರು. ವಿದ್ಯಾರ್ಥಿನಿ ಕವನ, ತೃತೀಯ ಬಿ.ಕಾಂ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News