ಅತಿಕ್ರಮಿತ ಸರಕಾರಿ ಜಮೀನು ತೆರವು ಕಾರ್ಯಾಚರಣೆ

Update: 2018-09-21 18:48 GMT

ಭಟ್ಕಳ, ಸೆ.21: ತಹಶೀಲ್ದಾರ್ ಆದೇಶದ ಮೇರೆಗೆ ತಾಲೂಕಿನ ಹಡೀನ್ ಗ್ರಾಮದಲ್ಲಿ ಅತಿಕ್ರವಿುತ ಸರಕಾರಿ ಜಮೀನು ಸ.ನಂ 95ನ್ನು ಕಂದಾಯ ಅಧಿಕಾರಿಗಳು ತೆರವುಗೊಳಿಸಿದ ಘಟನೆ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರಗಿದೆ.

ಹಡೀನ್ ಗ್ರಾಮದ ನಾಗೇಶ್ ಲಚ್ಮಯ್ಯ ನಾಯ್ಕ ಎಂಬವರು ಸರಕಾರಿ ಜಮೀನನ್ನು ಅತಿಕ್ರಮಣ ಮಾಡಿಕೊಂಡಿದ್ದು,ಕಳೆದ 4-5 ವರ್ಷಗಳಿಂದ ಅಲ್ಲಿ ತೆಂಗಿನ ಮರ, ಬಾಳೆಗಿಡ ನೆಟ್ಟು ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡುತ್ತಿದ್ದರು ಎಂಬ ಆರೋಪದ ಮೇಲೆ ಕಂದಾಯ ಅಧಿಕಾರಿಗಳು ಜಮೀನು ಖುಲ್ಲಾಗೊಳಿಸುವಂತೆ ಹಲವು ಬಾರಿ ನೋಟೀಸ್ ನೀಡಿದ್ದಾಗ್ಯೂ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಮತ್ತಷ್ಟು ಜಾಗವನ್ನು ಅತಿಕ್ರಮಿಸಿಕೊಂಡಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಭಟ್ಕಳ ತಹಶೀಲ್ದಾರ ವಿ.ಎನ್. ಬಾಡ್ಕರ ಆದೇಶದಂತೆ ಕಂದಾಯ ಅಧಿಕಾರಿಗಳು ಪೊಲೀಸ್ ಬಂದೋಬಸ್ತಿನಲ್ಲಿ ಸರಕಾರಿ ಜಾಗವನ್ನು ತೆರವುಗೊಳಿಸಿದು.

ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಮನೆಯ ಮಾಲಕ ರಸ್ತೆಯಲ್ಲಿ ಮಲಗಿಕೊಂಡು ಪ್ರತಿಭಟನೆ ನಡೆಸಿದ್ದು ಪೊಲೀಸರು ಮಧ್ಯಪ್ರವೇಶಿಸಿ ತೆರವು ಕಾರ್ಯಾಚರಣೆಗೆ ಅನುವು ಮಾಡಿಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News