ನಕ್ಸಲರಿಂದ ಟಿಡಿಪಿ ಶಾಸಕ, ಮಾಜಿ ಶಾಸಕನ ಹತ್ಯೆ

Update: 2018-09-23 09:25 GMT
ಕಿಡಾರಿ  ಸರ್ವೇಶ್ವರ ರಾವ್, ಸಿವೇರಿ  ಸೋಮ

ವಿಶಾಖಪಟ್ಟಣ  ಸೆ.23: ಆಂಧ್ರ ಪ್ರದೇಶದ ಅರುಕು ಕ್ಷೇತ್ರದ ಟಿಡಿಪಿ   ಶಾಸಕ  ಕಿಡಾರಿ  ಸರ್ವೇಶ್ವರ ರಾವ್  ಹಾಗೂ ಮಾಜಿ ಶಾಸಕ ಸಿವೇರಿ  ಸೋಮ ಅವರನ್ನು  ನಕ್ಸಲರು ಗುಂಡಿಟ್ಟು ಕೊಂದಿರುವ ಘಟನೆ ವಿಶಾಖಪಟ್ಟಣ ಜಿಲ್ಲೆಯ  ಟುಟಾಂಗಿ   ಎಂಬಲ್ಲಿ ನಡೆದಿದೆ.

ಶಾಸಕ  ಸರ್ವೇಶ್ವರ ರಾವ್  ಹಾಗೂ ಮಾಜಿ ಶಾಸಕ ಸೋಮ  ಕ್ಷೇತ್ರದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ  ಮಾವೊವಾದಿಗಳು  ಅವರ ಮೇಲೆ ದಾಳಿ ನಡೆಸಿದರು ಎನ್ನಲಾಗಿದೆ

ನಕ್ಸಲರ ಗುಂಡಿನ ದಾಳಿಯಿಂದ ಗಂಭೀರ ಗಾಯಗೊಂಡ  ಶಾಸಕ  ಸರ್ವೇಶ್ವರ ರಾವ್  ಹಾಗೂ ಮಾಜಿ ಶಾಸಕ ಸೋಮ  ಸ್ಥಳದಲ್ಲೇ ಮೃತಪಟ್ಟರು ಎಂದು ಅಧಿಕೃತ ಮೂಲಗಳು ತಿಳಿಸಿವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News