ಪಾಲಕ್ಕಾಡ್: ರೈಲಿನಲ್ಲಿ ಪ್ರಜ್ಞೆ ತಪ್ಪಿಸಿ ಯುವಕನ ದರೋಡೆ

Update: 2018-09-24 09:27 GMT

ಕಾಸರಗೋಡು, ಸೆ.24: ಪ್ರಜ್ಞೆ ತಪ್ಪಿಸಿ ಪ್ರಯಾಣಿಕನೋರ್ವನ ನಗ-ನಗದು ದರೋಡೆಗೈದ ಘಟನೆ ರೈಲಿನಲ್ಲಿ ನಡೆದಿದೆ. 

ಪಾಲಕ್ಕಾಡ್ ನ ಅರುಣ್ ದರೋಡೆಗೊಳಗಾದವರು. ಇವರು ಮುಂಬೈಯಿಂದ ರೈಲಿನಲ್ಲಿ  ಊರಿಗೆ ಮರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ಉದ್ಯೋಗ ಹುಡುಕಿಕೊಂಡು ಕೆಲದಿನಗಳ ಹಿಂದೆ ಅರುಣ್ ಮುಂಬೈಗೆ ತೆರಳಿದ್ದರು. ಕೆಲಸ ಸರಿಯಾದ ಹಿನ್ನೆಲೆಯಲ್ಲಿ ಹಾಪಾ ಎಕ್ಸ್ ಪ್ರೆಸ್ ರೈಲಿನಲ್ಲಿ ಊರಿಗೆ ಮರಳುತ್ತಿದ್ದಾಗ ಹಿಂದಿ ಮಾತನಾಡುವ ಪ್ರಯಾಣಿಕನೋರ್ವ ಪರಿಚಯವಾಗಿತ್ತು. ದಾರಿಮಧ್ಯೆ ಈತ ಬಿಸ್ಕೆಟ್ ನೀಡಿದ್ದು, ಅದನ್ನು ಸೇವಿಸಿದ ಬಳಿಕ ಅರುಣ್ ಪ್ರಜ್ಞೆ ಕಳೆದುಕೊಂಡಿದ್ದರು. ಇಂದು ಬೆಳಗ್ಗೆ ಕಾಸರಗೋಡಿಗೆ ತಲುಪಿದಾಗ ಅವರಿಗೆ ಪ್ರಜ್ಞೆ ಮರಳಿತ್ತು. ಈ ವೇಳೆ ಧರಿಸಿದ್ದ ಒಂದೂವರೆ ಪವನ್ ಚಿನ್ನಾಭರಣ, ಎರಡು ಸಾವಿರ ರೂ. ನಗದು, ಎಟಿಎಂ ಕಾರ್ಡು ಮೊದಲಾದವು ಒಳಗೊಂಡ ಪರ್ಸ್ ದರೋಡೆಯಾಗಿರುವುದು ಅರಿವಿಗೆ ಬಂದಿದೆ.  

ಕಾಸರಗೋಡು ನಿಲ್ದಾಣದಲ್ಲಿ ರೈಲ್ವೆ ಪೊಲೀಸರಿಗೆ ಅರುಣ್ ಮಾಹಿತಿ  ನೀಡಿದ್ದು, ಬಳಿಕ ಪೊಲೀಸರು ಅವರನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News