ಸೆ.28ರಂದು 'ಯುನಿವೆಫ್‌'ನಿಂದ ಸ್ನೇಹ ಸಂವಾದ ಕಾರ್ಯಕ್ರಮ

Update: 2018-09-25 03:31 GMT

ಮಂಗಳೂರು, ಸೆ.25: ಯುನಿವೆಫ್ ಕರ್ನಾಟಕದ ವತಿಯಿಂದ ಸೆ.28ರಂದು ಸಂಜೆ 6:30ಕ್ಕೆ ನಗರದ ಬಲ್ಮಠದ ಶಾಂತಿನಿಲಯದಲ್ಲಿ ‘ಸ್ನೇಹ ಸಂವಾದ’ ಕಾರ್ಯಕ್ರಮ ಆಯೋಜಿಸಲಾಗಿದೆ.

ಈ ಅಂತರ್ಧಮೀಯ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಂಗಳೂರಿನ ಖ್ಯಾತ ನ್ಯಾಯವಾದಿ ಉದಯಾನಂದ ಎ., ಹೆಬಿಕ್ ಮೆಮೋರಿಯಲ್ ಚರ್ಚ್‌ನ ಧರ್ಮಪಾಲಕ ಫಾ.ಗೋಲ್ಡಿನ್ ಜೆ. ಬಂಗೇರ, ಮುಸ್ಲಿಮ್ ಸೆಂಟ್ರಲ್ ಕಮಿಟಿಯ ಸದಸ್ಯ ಹನೀಫ್ ಖಾನ್ ಕೊಡಾಜೆ ಭಾಗವಹಿಸುವರು.

ಯುನಿವೆಫ್ ಕರ್ನಾಟಕದ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಅಧ್ಯಕ್ಷತೆ ವಹಿಸುವರು.

ಮಧುಬನ್ ಗ್ರಾಫಿಕ್ಸ್‌ನ ಪ್ರಸನ್ನ ಕುಮಾರ್, ಪಿ.ಎ.ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಅಬ್ದುಲ್ಲಾ ಶರೀಫ್ ಹಾಗೂ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಯ ಕೋಶಾಧಿಕಾರಿ ಮನ್ಸೂರ್ ಅಹ್ಮದ್ ಆಝಾದ್ ಮತ್ತಿತರರು ಭಾಗವಹಿಸುವರು.

ಇದೇ ಸಂದರ್ಭ ಮುಕ್ತ ಪ್ರಶ್ನೋತ್ತರ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News