ಆಧಾರ್: ಸುಪ್ರೀಂ ತೀರ್ಪಿನಿಂದ ಬಿಜೆಪಿಗೆ ‘ಕಪಾಳ ಮೋಕ್ಷ’ ; ಕಾಂಗ್ರೆಸ್

Update: 2018-09-26 15:01 GMT

ಹೊಸದಿಲ್ಲಿ, ಸೆ. 26: ಖಾಸಗಿ ಸಂಸ್ಥೆಗಳಿಗೆ ಆಧಾರ್ ದತ್ತಾಂಶ ಲಭ್ಯವಾಗಲು ಅವಕಾಶ ನೀಡುವ ಆಧಾರ್ ಕಾಯ್ದೆಯ 57ನೇ ಕಲಂ ಅನ್ನು ರದ್ದುಪಡಿಸಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಕಾಂಗ್ರೆಸ್ ಬುಧವಾರ ಸ್ವಾಗತಿಸಿದೆ ಹಾಗೂ ಇದು ‘‘ಬಿಜೆಪಿಗೆ ಕಪಾಳ ಮೋಕ್ಷ’’ ಎಂದು ವ್ಯಾಖ್ಯಾನಿಸಿದೆ. ‘‘ಆಧಾರ್ ಕಾಯ್ದೆಯ 57ನೇ ಕಲಂ ಅನ್ನು ರದ್ದುಪಡಿಸಿದ ಸುಪ್ರೀಂ ಕೋರ್ಟ್‌ನ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಪರಿಶೀಲನಾ ಉದ್ದೇಶಕ್ಕಾಗಿ ಖಾಸಗಿ ಸಂಸ್ಥೆಗಳಿಗೆ ಆಧಾರ್ ಸಂಖ್ಯೆಯನ್ನು ಬಳಸಲು ಅವಕಾಶ ನೀಡಬಾರದು.’’ ಎಂದು ಕಾಂಗ್ರೆಸ್‌ನ ರಾಷ್ಟ್ರೀಯ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News