ಮೋದಿಯ ಬಡವರ ಪರ ಸರಕಾರದ ವಿಜಯ: ಬಿಜೆಪಿ

Update: 2018-09-26 15:25 GMT

ಹೊಸದಿಲ್ಲಿ, ಸೆ. 26: ಆಧಾರ್ ಕುರಿತು ಸುಪ್ರೀಂ ಕೋರ್ಟ್ ಬುಧವಾರ ನೀಡಿದ ತೀರ್ಪು ಮೋದಿ ಸರಕಾರದ ಅತಿ ದೊಡ್ಡ ವಿಜಯ ಎಂದು ಹೇಳಿರುವ ಬಿಜೆಪಿ, ಸುಪ್ರೀಂ ಕೋರ್ಟ್ ಸಾಂವಿಧಾನಿಕ ಮೌಲ್ಯವನ್ನು ಎತ್ತಿ ಹಿಡಿದಿದೆ ಹಾಗೂ ಇದು ಖಾಸಗಿತನವನ್ನು ಉಲ್ಲಂಘಿಸುವುದಿಲ್ಲ ಎಂದಿದೆ.

ಆಧಾರ್ ಕಾರ್ಡ್ ಸುರಕ್ಷಿತವಾಗಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಪ್ರತಿಪಕ್ಷಗಳು ಮಧ್ಯವರ್ತಿಗಳ ಬಗ್ಗೆ ಒಲವು ಹೊಂದಿದ್ದ ಸಂದರ್ಭ ಸೌಲಭ್ಯಗಳನ್ನು ಜನರಿಗೆ ನೇರವಾಗಿ ನೀಡಲು ಮೋದಿ ಸರಕಾರ ಆಧಾರ್ ಜಾರಿಗೆ ತಂದಿತು. ಇದರ ವಿರುದ್ಧ ಕಾಂಗ್ರೆಸ್ ಯಾಕೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಬೇಕಿತ್ತು ಎಂದು ಬಿಜೆಪಿಯ ವಕ್ತಾರ ಸಂಬಿತ್ ಪಾತ್ರ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News