ಬಿಜೆಪಿ ರ‍್ಯಾಲಿಯಲ್ಲಿ ತಲೆಕೆಳಗಾಗಿ ತ್ರಿವರ್ಣ ಧ್ವಜ ಹಾರಾಟ: ಪ್ರಕರಣ ದಾಖಲು

Update: 2018-09-29 13:45 GMT

ಕಥುವಾ, ಸೆ.29: ಬಿಜೆಪಿಯ ನಾಯಕರೊಬ್ಬರ ನೇತೃತ್ವದಲ್ಲಿ ನಡೆದ ರ‍್ಯಾಲಿಯಲ್ಲಿ ತ್ರಿವರ್ಣ ಧ್ವಜವನ್ನು ತಲೆಕೆಳಗಾಗಿ ಹಾರಿಸಲಾಗಿದೆ ಎಂದು ಆರೋಪಿಸಲಾಗಿದ್ದು, ಈ ಬಗ್ಗೆ ಎಫ್ ಐಆರ್ ದಾಖಲಾಗಿದೆ.

ಬಿಜೆಪಿ ನಾಯಕ ರಾಜೀವ್ ಜಸ್ರೋಟಿಯಾ ಮತ್ತು ಪಕ್ಷದ ಸ್ಥಳೀಯ ಚುನಾವಣೆಯ ಅಭ್ಯರ್ಥಿ ಬಿಜೆಪಿ ಸದಸ್ಯ ರಾಹುಲ್ ದೇವ್ ಶರ್ಮಾ ಹಮ್ಮಿಕೊಂಡಿದ್ದ ರ‍್ಯಾಲಿಯಲ್ಲಿ ತ್ರಿವರ್ಣ ಧ್ವಜವನ್ನು ತಲೆಕೆಳಗಾಗಿ ಹಾರಿಸಲಾಗಿದೆ ಎಂದು ಸ್ಥಳೀಯ ನಿವಾಸಿ ವಿನೋದ್ ನಿಝಾವನ್ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಶರ್ಮಾ ನಾಮಪತ್ರ ಸಲ್ಲಿಸುವ ಸಂದರ್ಭ ಕಥುವಾ ಶಾಸಕ ಜಸ್ರೋಟಿಯಾ ನೇತೃತ್ವದಲ್ಲಿ ರ‍್ಯಾಲಿಯೊಂದು ನಡೆದಿತ್ತು. “ಬಿಜೆಪಿ ರ‍್ಯಾಲಿಯಲ್ಲಿ ತ್ರಿವರ್ಣ ಧ್ವಜ ತಲೆಕೆಳಗಾಗಿ ಹಾರಿಸಿರುವ ವಿಚಾರ ಹೀನ ಹಾಗು ಭಾರತದ ದೇಶಭಕ್ತ ಪ್ರಜೆಗಳ ಭಾವನೆಗೆ ಧಕ್ಕೆ ತಂದಿದೆ” ಎಂದು ದೂರಿನಲ್ಲಿ ನಿಝಾವನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News