ಕಡಬದ ವ್ಯಕ್ತಿ ಹಾಸನದಲ್ಲಿ ನಿಗೂಢ ಮೃತ್ಯು

Update: 2018-10-03 06:19 GMT

ಕಡಬ, ಅ.3: ಕಡಬದ ವ್ಯಕ್ತಿಯೋರ್ವರು ಹಾಸನದ ಅರಕಲಗೂಡಿನಲ್ಲಿ ನಿಗೂಢವಾಗಿ ಮೃತಪಟ್ಟಿರುವ ಘಟನೆ ಬುಧವಾರ ಬೆಳಗ್ಗೆ ವರದಿಯಾಗಿದೆ.

ಮೃತ ವ್ಯಕ್ತಿಯನ್ನು ಕಡಬ ತಾಲೂಕು ಬಂಟ್ರ ಗ್ರಾಮದ ಹಳೇ ಸ್ಟೇಷನ್ ನಿವಾಸಿ ಅಬ್ದುಲ್ ರಹಿಮಾನ್ ಎಂಬವರ ಪುತ್ರ ಅಬ್ದುಲ್ ಅಝೀಝ್ ಎಂದು ಗುರುತಿಸಲಾಗಿದೆ.

ಮೃತರು ಕಳೆದೊಂದು ವಾರದಿಂದ ಅರಕಲಗೂಡು ಪರಿಸರದಲ್ಲಿ ಇದ್ದರೆನ್ನುವ ಮಾಹಿತಿಯಿದ್ದು, ಮಂಗಳವಾರ ರಾತ್ರಿ ಅವರನ್ನು ಕಂಡವರಿದ್ದಾರೆ‌. ಆದರೆ ಬುಧವಾರ ಬೆಳಗ್ಗೆ ಬಸ್ ನಿಲ್ದಾಣದ ಬಳಿ ನಿಗೂಢವಾಗಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News