ಪುದು ಗ್ರಾಪಂ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಚತಾ ಅಭಿಯಾನ

Update: 2018-10-03 12:27 GMT

ಫರಂಗಿಪೇಟೆ, ಅ. 3: ಪುದು ಗ್ರಾ ಪಂ ಮತ್ತು ಹ್ಯೂಮ್ ಡೇ ಕಾಂಚನ ಕಂಪನಿ ಸಹಯೋಗದಲ್ಲಿ ಗಾಂಧಿ ಜಯಂತಿ ಪ್ರಯುಕ್ತ  ಫರಂಗಿಪೇಟೆಯ ಸೇವಾಂಜಲಿ ಬಳಿ  ಪುದು ಗ್ರಾಮ ಪಂ. ಅಧ್ಯಕ್ಷ ಗಿಡ ನೆಡುವೂದರ ಮೂಲಕ ಸ್ವಚ್ಚ ಭಾರತ್ ಅಬಿಯಾನವನ್ನು ಉದ್ಘಾಟನೆ ಮಾಡಲಾಯಿತು.

ಬಳಿಕ ಫರಂಗಿಪೇಟೆ ಬಸ್ ತಂಗುದಾನದ ಬಳಿ ಸಭೆ ನಡೆಯಿತು, ಪಂಚಾಯತ್ ಅಬಿವೃದ್ಧಿ ಅಧಿಕಾರಿ ಪ್ರೇಮಲತಾ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಉಮರ್ ಫಾರೂಕು, ಕಾಂಗ್ರೆಸ್ಸ್ ಅಲ್ಪ ಸಂಖ್ಯಾತ ಮುಡಿಪು ಘಟಕದ ಅಧ್ಯಕ್ಷ ಇಮ್ತಿಯಾಝ್ ಅಲ್ಫಾ, ಪುದು ಗ್ರಾಮ ಪಂ ಸದಸ್ಯರಾದ ಇಕ್ಬಾಲ್ ಸುಜೀರ್, ನಝೀರ್ ಹತ್ತನೇಮೈಲ್ ಕಲ್ಲು, ಹಾಶಿರ್ ಪೇರಿಮಾರ್, ರಿಯಾಝ್ ಕುಂಪನಮಜಲ್, ಲಕ್ಷ್ಮೀ, ಸಿಬ್ಬಂದಿ ಯೆಶೋದ, ಸುರೇಕ, ವಿನಯ, ಅಬ್ದುಲ್ ಸಲಾಮ್, ಕೈಸ್ ಮತ್ತು ಹ್ಯೂಮ್ ಡೇ ಅಧಿಕಾರಿಗಳು ಈ ಸಂದರ್ಭದಲ್ಲಿ  ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News