ಎಸ್.ಡಿ.ಎ.ಯು ಬಂಟ್ವಾಳ ತಾಲೂಕು ಆಟೋ ಚಾಲಕರ ಸ್ನೇಹ ಸಂಗಮ

Update: 2018-10-03 12:33 GMT

ಫರಂಗಿಪೇಟೆ, ಅ 3: ಸೋಶಿಯಲ್ ಡೆಮೋಕ್ರೆಟಿಕ್ ಆಟೋ ಯೂನಿಯನ್ ಬಂಟ್ವಾಳ ತಾಲೂಕು ವತಿಯಿಂದ ಬಿಸಿರೋಡಿನ ರಿಕ್ಷಾ ಭವನದಲ್ಲಿ ಆಟೋ ಚಾಲಕರ ಸ್ನೇಹ ಸಂಗಮ ಕಾರ್ಯಕ್ರಮ ನಡೆಯಿತು.

ಚಾಲಕರನ್ನು ಉದ್ದೇಶಿಸಿ ಮಾತನಾಡಿದ ಎಸ್.ಡಿ.ಪಿ ಐ ರಾಜ್ಯ ಸಮಿತಿ ಸದಸ್ಯ ಜಲೀಲ್ ಕೆ, ರಿಕ್ಷಾ ಚಾಲಕರು ಅಸಂಘಟಿತರಾದ ಕಾರಣದಿಂದ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದು ಶ್ರಮ ಜೀವಿಯಾದ ಚಾಲಕರು ಸಂಘಟಿತರಾಗಿ ಸ್ವಾಬಿಮಾನ ಘನತೆಯಿಂದ ತನ್ನ ವೃತ್ತಿಯನ್ನು ನಿರ್ವಹಿಸಬೇಕಾಗಿದೆ. ಅನಗತ್ಯ ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಪರಸ್ಪರ ಸಹೋದರರಾಗಿ ಸ್ಪಂದಿಸುವ ಮನೋಬಾವ ಬೆಳೆಸಿ ಏಕತೆಯಿಂದ ಚಾಲಕರು ಎದುರಿಸುವ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಬೇಕಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಯು ಬಂಟ್ವಾಳ ತಾಲೂಕು ಅಧ್ಯಕ್ಷ ಯಕೂಬ್ ಮದ್ದ ವಹಿಸಿದ್ದರು ಪ್ರಾಸ್ತಾವಿಕವಾಗಿ ಯೂನಿಯನ್ ಜಿಲ್ಲಾ ಸಂಚಾಲಕ ಜಾಬಿರ್ ಅರಿಯಡ್ಕ ಮಾತನಾಡಿದರು, ಅತಿಥಿಗಳಾಗಿ ಎಸ್.ಡಿ.ಪಿ.ಐ ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ಯೂಸುಫ್ ಆಲಡ್ಕ, ಬಂಟ್ವಾಳ ತಾಲೂಕು ಆಟೋ ಯೂನಿಯನ್ ಸಂಚಾಲಕರಾದ ಮಾಲಿಕ್ ಕೊಳಕೆ ಉಪಸ್ಥಿತರಿದ್ದರು.

ಉಪಾಧ್ಯಕ್ಷ ಸಂಶುದ್ದೀನ್ ಪಲ್ಲಮಜಲ್ ಸ್ವಾಗತಿಸಿ, ಕಾದರ್ ಅಮೆಮಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸಭೆಯಲ್ಲಿ ಆಟೋ ಚಾಲಕರ ಆಂತರಿಕ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News