ಬ್ರಹ್ಮಪುತ್ರ ನದಿದಂಡೆಯಲ್ಲಿ ಸ್ಫೋಟ: ನಾಲ್ವರಿಗೆ ಗಾಯ

Update: 2018-10-13 13:06 GMT

ಗುವಾಹಟಿ, ಅ.13: ಬ್ರಹ್ಮಪುತ್ರ ನದಿದಂಡೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ನಾಲ್ವರು ಗಾಯಗೊಂಡಿರುವ ಘಟನೆ ಕೇಂದ್ರ ಗುವಾಹಟಿಯಲ್ಲಿ ಸಂಭವಿಸಿದೆ. ದುರ್ಗಾ ಪೂಜೆ ಹಿನ್ನೆಲೆಯಲ್ಲಿ ನೂರಾರು ಮಂದಿ ಇಲ್ಲಿನ ಮಾರುಕಟ್ಟೆಗೆ ಆಗಮಿಸಿದ್ದರು. ಪಾನ್ ಬಝಾರ್ ಸಮೀಪದ ಫುಟ್ ಪಾತ್ ನಲ್ಲಿ ಸ್ಫೋಟ ಸಂಭವಿಸಿತ್ತು.

ನಾಲ್ವರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಈಗಾಗಲೇ ಸ್ಥಳಕ್ಕಾಗಮಿಸಿದ್ದು, ಬಾಂಬ್ ದಳ ಪರಿಶೀಲನೆ ನಡೆಸಲಿದೆ. “ಇದು ಬಾಂಬ್ ಸ್ಫೋಟವೆಂದು ನಮಗನಿಸುತ್ತಿಲ್ಲ. ಕಲ್ಲುಗಳು ಹಾರಿದ್ದರಿಂದ ಗಾಯಗಳಾಗಿವೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಸ್ಫೋಟದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News