ಕೇವಲ 10 ರೂ.ಗಾಗಿ ಸ್ನೇಹಿತನನ್ನೇ ಇರಿದು ಕೊಂದ!

Update: 2018-10-13 13:42 GMT

ಬರೇಲಿ,ಅ.13: ಇಲ್ಲಿಯ ಕ್ಷೌರದಂಗಡಿಯೊಂದರಲ್ಲಿ ಕೇವಲ ಹತ್ತು ರೂ.ಗಾಗಿ ನಡೆದ ವಾಗ್ವಾದವು ಓರ್ವನ ಹತ್ಯೆಯಲ್ಲಿ ಕೊನೆಗೊಂಡಿದೆ.

ಪ್ರೇಮಪಾಲ್ ಗಂಗ್ವಾರ್(42) ಎಂಬಾತ ಶುಕ್ರವಾರ ಸಂಜೆ ಕ್ಷೌರಕ್ಕಾಗಿ ತನ್ನ ಸ್ನೇಹಿತ ಅಹಿಬರನ ಲಾಲ್‌ನ ಸಲೂನ್‌ಗೆ ತೆರಳಿದ್ದ. ಈ ವೇಳೆ 10 ರೂ.ಗಾಗಿ ಅವರ ಮಧ್ಯೆ ವಾಗ್ವಾದ ನಡೆದಿತ್ತು. ಇಬ್ಬರೂ ಕಳೆದ 20 ವರ್ಷಗಳಿಂದ ಗೆಳೆಯರಾಗಿದ್ದರಿಂದ ಇದು ತಮಾಷೆಗೆ ನಡೆಯುತ್ತಿರುವ ಜಗಳ ಎಂದೇ ಅಲ್ಲಿದ್ದವರು ಭಾವಿಸಿದ್ದರು. ತನ್ಮಧ್ಯೆ ಗಂಗ್ವಾರ್ ಲಾಲ್‌ಗೆ ತಪರಾಕಿ ನೀಡಿದ್ದು,ಇದರಿಂದ ಕುಪಿತಗೊಂಡ ಲಾಲ್ ಕತ್ತರಿಯಿಂದ ಇರಿದಿದ್ದ. ತೀವ್ರವಾಗಿ ಗಾಯಗೊಂಡಿದ್ದ ಗಂಗ್ವಾರ ಆಸ್ಪತ್ರೆ ದಾರಿಯಲ್ಲಿ ಮೃತಪಟ್ಟಿದ್ದಾನೆ.

ತಂದೆಯ ರಕ್ಷಣೆಗಾಗಿ ಧಾವಿಸಿದ್ದ ಗಂಗ್ವಾರ್‌ನ ಇಬ್ಬರು ಪುತ್ರರ ಮೇಲೂ ಹಲ್ಲೆ ನಡೆಸಿದ ಲಾಲ್ ಪರಾರಿಯಾಗಿದ್ದು,ಪೊಲೀಸರು ಆತನಿಗಾಗಿ ಹುಡುಕಾಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News