ಎಸ್ಸೆಸೆಫ್ ಮೋಂತಿಮಾರ್ ಪಡ್ಪು ಶಾಖೆಯ ವತಿಯಿಂದ ಯುನಿಟ್ ಕಾನ್ಫರೆನ್ಸ್

Update: 2018-10-15 07:38 GMT

ಮಂಗಳೂರು, ಅ. 15: ಎಸ್ಸೆಸೆಫ್  ಮೊಂತಿಮಾರ್ ಪಡ್ಪು ಶಾಖೆಯ ಯೂನಿಟ್ ಸಮ್ಮೇಳನ ರವಿವಾರ ನಡೆಯಿತು.

ಅಬ್ದುಲ್ ರಹಿಮಾನ್ ಸಂಪಿಲ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವು, ಸ್ಥಳೀಯ ಖತೀಬ್ ಬಿ.ಎ. ಅಬ್ಬಾಸ್ ಮದನಿ ಉದ್ಘಾಟಿಸಿದರು. ಎಸ್ಸೆಸೆಫ್ ಕರ್ನಾಟಕ ರಾಜ್ಯ ಸದಸ್ಯರಾದ ಇಸ್ಮಾಯಿಲ್ ಮಾಸ್ಟರ್ ಮೊಂಟುಗೋಳಿ ಪ್ರಾಸ್ತಾವಿಕ ಭಾಷಣ ಮಾಡಿದರು. , ಎಸ್ಸೆಸೆಫ್  ಕಾಸರಗೋಡು ಜಿಲ್ಲಾ ಅಧ್ಯಕ್ಷ ಜಬ್ಬಾರ್ ಸಖಾಫಿ ಪಾತೂರ್ ಮುಖ್ಯ ಪ್ರಭಾಷಣ ಮಾಡಿದರು.

ಮುಖ್ಯ ಅತಿಥಿಗಳಾಗಿ ಎಸ್ ವೈ ಎಸ್ ಮೊಂತಿಮಾರ್ ಬ್ರಾಂಚ್ ಅಧ್ಯಕ್ಷ ಇಬ್ರಾಹಿಂ ಕೊಟ್ರಸ್, ಎಸ್ಸೆಸೆಫ್ ಮಂಚಿ ಸೆಕ್ಟರ್ ಅಧ್ಯಕ್ಷ ಅಸ್ಲಾಂ ಸಂಪಿಲ , ಪಂಜಿಕ್ಕಲ್  ಜಮಾಅತ್ ಅಧ್ಯಕ್ಷ ಅಬ್ದುಲ್ ರಹಿಮಾನ್, ನೂಜಿ ಜಮಾಅತ್ ಅಧ್ಯಕ್ಷ ಅಬ್ದುಲ್ ಅಝೀಝ್, ಸಿರಾಜುಲ್ ಹುದಾ ಕಮಿಟಿ ಅಧ್ಯಕ್ಷ ಇಬ್ರಾಹಿಂ ಪಡ್ಪು, ರವೂಫ್ ಕುಕ್ಕಾಜೆ ಉಪಸ್ಥಿತರಿದ್ದರು. ಹನೀಫ್ ಬಾ ಹಸನಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News